ಅಡಿಕೆ ನಿಷೇಧ ಇಲ್ಲ, ಆಜಾದ್ -ಸಿದ್ದು ಭರವಸೆ
ನವದೆಹಲಿ, ಡಿ.16: ಸಿಗರೇಟ್ ಕಂಪನಿಗಳ ಲಾಬಿಗೆ ಕೇಂದ್ರ ಸರ್ಕಾರ ಮಣಿದಿದ್ದು, ಅಡಿಕೆಯನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರು ಇಟ್ಟಿದ್ದಾರೆ ಎಂಬ ಸುದ್ದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಲ್ಲಗೆಳೆದಿದ್ದಾರೆ.
ಅಡಿಕೆ ನಿಷೇಧ ಮಾಡುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ ಹಾಗೂ ಸುಪ್ರೀಂ ಕೋರ್ಟಿಗೆ ಯಾವುದೇ ರೀತಿಯ ಅಫಿಡೆವಿಟ್ ನ್ನು ಕೇಂದ್ರ ಸರ್ಕಾರ ಸಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೇಂದ್ರ
ಆರೋಗ್ಯ
ಸಚಿವ
ಗುಲಾಮ್
ನಬಿ
ಅಜಾದ್
ಅವರನ್ನು
ಸೋಮವಾರ
ಭೇಟಿ
ಮಾಡಿ
ಅಡಿಕೆ
ಬೆಳೆಗಾರರ
ಸಮಸ್ಯೆ
ಬಗ್ಗೆ
ಚರ್ಚೆ
ಮಾಡಿದ
ನಂತರ
ಸುದ್ದಿಗಾರರಿಗೆ
ಸಿದ್ದರಾಮಯ್ಯ
ಅವರು
ವಿಷಯ
ತಿಳಿಸಿದರು.
ಅಡಿಕೆ
ಬೆಳೆಯನ್ನು
ನಿಷೇಧ
ಮಾಡುವಂತೆ
ಸುಪ್ರೀಂ
ಕೋರ್ಟ್ಗೆ
ಕೇಂದ್ರ
ಸರ್ಕಾರ
ಪ್ರಮಾಣ
ಪತ್ರ
ಸಲ್ಲಿಸಿಲ್ಲ.
ಕೇವಲ
ಮೌಖಿಕವಾಗಿ
ಹೇಳಿದೆಯಷ್ಟೇ
ಎಂದು
ಸ್ಪಷ್ಟಪಡಿಸಿದರು.
[ಮಲೆನಾಡಿಗೆ
ಮರಣ
ಶಾಸನ
ನೀಡಿದ
ಗುಲಾಂ]
ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಮತ್ತು ನಿಷೇಧ ಮಾಡುವುದರಿಂದ ಉಂಟಾಗಬಹುದಾದ ಹಾನಿ, ಅವಾಂತರಗಳನ್ನು ಸಚಿವರ ಗಮನಕ್ಕೆ ತಂದಿದ್ದೇನೆ. ಅನಗತ್ಯ ಆತಂಕ ಬೇಡ, ಅಡಿಕೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ ಎಂದರು.
ರಾಜ್ಯದ 11 ಜಿಲ್ಲೆಗಳಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಅಡಿಕೆಯಲ್ಲಿ ಆರೋಗ್ಯಕ್ಕೆ ಹಾನಿವುಂಟು ಮಾಡುವಂಥ ಯಾವುದೇ ಅಂಶಗಳಿಲ್ಲ. ಬದಲಾಗಿ ಔಷಧಿಯ ಗುಣಗಳಿವೆ. ಅಡಿಕೆ ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬ ಒಳ್ಳೆಯ ಅಂಶಗಳನ್ನು ಸಚಿವರ ಗಮನಕ್ಕೆ ತಂದಿದ್ದೇನೆ. ಯಾವುದೇ ಕಾರಣಕ್ಕೂ ಅಡಿಕೆಯನ್ನು ನಿಷೇಧಿಸದಂತೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.