ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತ: ಸುಪ್ರೀಂಕೋರ್ಟ್ ಕದ ತಟ್ಟಿದ ಪಕ್ಷೇತರ ಶಾಸಕರು

|
Google Oneindia Kannada News

Recommended Video

Karnataka Crisis : ಕುಮಾರಸ್ವಾಮಿ ಸರ್ಕಾರ ಉರುಳಿಸಲು ಸುಪ್ರೀಂ ಕೋರ್ಟ್ ಗೆ ಹೋದ ಇಬ್ಬರು ಶಾಸಕರು..?

ನವದೆಹಲಿ, ಜುಲೈ 21: ಇಬ್ಬರು ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ವಿಶ್ವಾಸಮತ ಯಾಚನೆ ಕುರಿತು ತುರ್ತು ಅರ್ಜಿಯೊಂದನ್ನು ಹಾಕಿದ್ದಾರೆ.

ನಾಳೆ (ಸೋಮವಾರ) ಸಂಜೆ 5 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಪಕ್ಷೇತರ ಶಾಸಕರು ಸುಪ್ರೀಂ ಮೊರೆ ಹೋಗಿದ್ದಾರೆ.

ವಿಶ್ವಾಸಮತದ ಚರ್ಚೆ; ಮೈತ್ರಿ ಸರ್ಕಾರದ ಕಣ್ಣು ಸುಪ್ರೀಂ ತೀರ್ಪಿನ ಮೇಲೆ!ವಿಶ್ವಾಸಮತದ ಚರ್ಚೆ; ಮೈತ್ರಿ ಸರ್ಕಾರದ ಕಣ್ಣು ಸುಪ್ರೀಂ ತೀರ್ಪಿನ ಮೇಲೆ!

ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಿದ್ದ ಪಕ್ಷೇತರ ಶಾಸಕರು, ಅತೃಪ್ತ ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾದ ಕೂಡಲೇ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಬಿಜೆಪಿ ಪಾಳಯ ಸೇರಿದ್ದಾರೆ. ಪ್ರಸ್ತುತ ಇಬ್ಬರೂ ಶಾಸಕರು ಮುಂಬೈನಲ್ಲಿದ್ದಾರೆ ಎನ್ನಲಾಗಿದೆ.

Two independent Karnataka MLAs moved to supreme court

ಗುರುವಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ, ಆದರೆ ಎರಡು ದಿನ ಕಲಾಪ ನಡೆದರೂ ಸಹ ಮತಯಾಚನೆ ಆಗಿಲ್ಲ, ಹಾಗಾಗಿ ನಾಳೆಯೇ ವಿಶ್ವಾಸಮತ ಅಂಗೀಕಾರ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಪಕ್ಷೇತರರು ಸುಪ್ರೀಂಗೆ ಅರ್ಜಿ ಹಾಕಿಕೊಂಡಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅವರು ಸಹ ಸಿಎಂ ಅವರಿಗೆ ಸೋಮವಾರ ವಿಶ್ವಾಸಮತ ಯಾಚನೆ ಮಾಡಿರೆಂದು ಸೂಚನೆ ನೀಡಿದ್ದಾರೆ. ಈಗ ಸುಪ್ರೀಂಕೋರ್ಟ್ ಸಹ ಸಿಎಂ ಅವರಿಗೆ ನಿರ್ದೇಶನ ನೀಡಿದಲ್ಲಿ ನಾಳೆಯೇ ವಿಶ್ವಾಸಮತ ಯಾಚನೆ ಆಗಿಬಿಡಲಿದೆ.

English summary
Two independent Karnataka MLAs -H Nagesh and R Shankar-have moved Supreme Court seeking a direction from the Court to Karnataka Government to conduct floor test tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X