ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪಕ್ಕೆ ದೊಡ್ಡ ತಿರುವು; ಮಹಿಳೆ ವಿರುದ್ಧವೇ ಕೇಸ್

|
Google Oneindia Kannada News

ನವದೆಹಲಿ, ಜನವರಿ 15: ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ವಿರುದ್ಧ ಗಾಯಕಿ ಮಾಡಿದ್ದ ಅತ್ಯಾಚಾರ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ. ಎರಡು ದಿನಗಳ ಹಿಂದಷ್ಟೇ ಎನ್ ಸಿಪಿ ಮುಖಂಡ ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಆರೋಪ ಮಾಡಿದ್ದ ಗಾಯಕಿ ವಿರುದ್ಧ ಗುರುವಾರ ಬಿಜೆಪಿ ಮುಖಂಡ ಕೃಷ್ಣ ಹೆಗ್ಡೆ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗಾಯಕಿ ರೇಣು ತಮ್ಮ ಹಿಂದೆ ಬಿದ್ದು, ಮೆಸೇಜ್ ಮಾಡುತ್ತಾ, ತನ್ನ ಬಳಿ ಸಂಬಂಧ ಬೆಳೆಸುವಂತೆ 2010ರಿಂದಲೂ ಪೀಡಿಸುತ್ತಿರುವುದಾಗಿ ಕೃಷ್ಣ ಹೆಗ್ಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎನ್ ಸಿಪಿ ಮುಖಂಡ ಧನಂಜಯ ಮುಂಡೆ ವಿರುದ್ಧ ಗಾಯಕಿ ಅತ್ಯಾಚಾರ ಆರೋಪಎನ್ ಸಿಪಿ ಮುಖಂಡ ಧನಂಜಯ ಮುಂಡೆ ವಿರುದ್ಧ ಗಾಯಕಿ ಅತ್ಯಾಚಾರ ಆರೋಪ

ಮಂಗಳವಾರ ಮಹಾರಾಷ್ಟ್ರ ಸಚಿವ ಧನಂಜಯ್ ಮುಂಡೆ ವಿರುದ್ಧ 38 ವರ್ಷದ ಗಾಯಕಿ ರೇಣು ಅತ್ಯಾಚಾರ ಆರೋಪ ಮಾಡಿದ್ದರು. ತನಗೆ ಬಾಲಿವುಡ್ ನಲ್ಲಿ ಅವಕಾಶ ನೀಡುವುದಾಗಿ ಭರವಸೆ ಕೊಟ್ಟು ಸಚಿವರು ಹಲವು ಬಾರಿ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿದ್ದರು. ಆನಂತರ, ರೇಣು ಸಹೋದರಿ ಜೊತೆ ತಾವು ಸಂಬಂಧ ಹೊಂದಿದ್ದು, ಇವರಿಬ್ಬರೂ ಸೇರಿ ತಮ್ಮನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಧನಂಜಯ್ ಹೇಳಿಕೊಂಡಿದ್ದರು. ಈ ಕುರಿತು ತಾವು ನವೆಂಬರ್ ತಿಂಗಳಿನಲ್ಲಿಯೇ ದೂರು ನೀಡಿರುವುದಾಗಿ ತಿಳಿಸಿದ್ದರು.

Twist In Dhananjay Munde Rape Case BJP Leader Complaint Against Woman

ಈ ಹೇಳಿಕೆ ನೀಡಿದ ಧನಂಜಯ್ ಅವರನ್ನು ಉಚ್ಛಾಟನೆ ಮಾಡುವಂತೆ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮಹಿಳಾ ಸದಸ್ಯರು ಬೇಡಿಕೆ ಇಟ್ಟಿದ್ದರು. ಎನ್ ಸಿಪಿ ಮುಖಂಡ ಶರದ್ ಪವಾರ್ ಕೂಡ ಈ ಆರೋಪ ಗಂಭೀರ ಎಂದು ಪರಿಗಣಿಸಿ, ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದರು. ಇದೀಗ ಬಿಜೆಪಿ ಮುಖಂಡ ಕೃಷ್ಣ ಹೆಗ್ಡೆ ಗಾಯಕಿ ರೇಣು ವಿರುದ್ಧವೇ ದೂರು ನೀಡಿರುವುದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.

English summary
BJP leader Krishna Hegde on Thursday has made a written complaint in the Amboli Police Station against the woman who has levelled rape allegations against maharashtra minister Dhananjay Munde
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X