ತ್ರಿವಳಿ ತಲಾಖ್ ನಿಷೇಧಕ್ಕೆ ಹೊಸ ಮಸೂದೆ: ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ
ನವದೆಹಲಿ, ಜೂನ್ 13: ವಿವಾದಾತ್ಮಕ ತ್ರಿವಳಿ ತಲಾಖ್ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಬುಧವಾರ ನಡೆದ ಸಭೆಯಲ್ಲಿ ಹೊಸ ಮಸೂದೆಗೆ ಒಪ್ಪಿಗೆ ದೊರೆತಿದ್ದು ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.
17 ನೇ ಲೋಕಸಭೆಯ ಮೊದಲ ಮುಂಗಾರು ಅಧಿವೇಶನ ಜೂನ್ 17 ರಿಂದ ಆರಂಭವಾಗಲಿದೆ.
ತ್ರಿವಳಿ ತಲಾಕ್ : ಮುಸ್ಲಿಂ ಮಹಿಳೆ ರಕ್ಷಣಾ ಮಸೂದೆಯಲ್ಲೇನಿದೆ?
ಹದಿನಾರನೇ
ಲೋಕಸಭೆಯಲ್ಲೂ
ತ್ರಿವಳಿ
ತಲಾಖ್
ಬಗ್ಗೆ
ಸಾಕಷ್ಟು
ಚರ್ಚೆ
ನಡೆದಿತ್ತಾದರೂ
ಲೋಕಸಭೆಯ
ಅವಧಿ
ಮುಕ್ತಾಯವಾಗಿದ್ದರಿಂದ
ಮತ್ತು
ರಾಜ್ಯ
ಸಭೆಯಲ್ಲೂ
ಈ
ಮಸೂದೆಗೆ
ಅಂಗೀಕಾರ
ಸಿಗದ
ಕಾರಣ
ಅದು
ಮಂಡನೆಯಾಗಿರಲಿಲ್ಲ.
ಯಾವುದೇ
ಲಿಖಿತ
ದಾಖಲೆಗಳಿಲ್ಲದೆ
ವಿಚ್ಛೇದನ
ನೀಡುವ
ಈ
ಪದ್ಧತಿಯನ್ನು
2018
ರ
ಆಗಸ್ಟ್
ನಲ್ಲಿ
ಸುಪ್ರೀಂ
ಕೋರ್ಟ್
ನೀಡಿದ್ದ
ಮಹತ್ವದ
ತೀರ್ಪಿನಲ್ಲಿ
ಅಪರಾಧ
ಮತ್ತು
ಅಸಾಂವಿಧಾನಿಕ
ಎನ್ನಲಾಗಿತ್ತು.
ನಂತರ
ಈ
ಕುರಿತು
ಕಾನೂನು
ಜಾರಿಗೆ
ತರುವಂತೆ
ಕೇಂದ್ರ
ಸರ್ಕಾರಕ್ಕೆ
ಸೂಚಿಸಿತ್ತು.
ನಂತರ
ಲೋಕಸಭೆಯಲ್ಲಿ
ಈ
ಮಂಡನೆಗೆ
ಅಂಗೀಕಾರ
ದೊರೆತಿತ್ತಾದರೂ
ರಾಜ್ಯ
ಸಭೆಯಲ್ಲಿ
ದೊರೆತಿರಲಿಲ್ಲ.
ಅಷ್ಟರಲ್ಲೇ
ಹಿಂದಿನ
ಲೋಕಸಬೆಯ
ಅವಧಿ
ಮುಗಿದಿದ್ದರಿಂದ
ಅದು
ಜಾರಿಗೆ
ಬಂದಿರಲಿಲ್ಲ.
ಇದೀಗ ಮಂಡನೆಯಾಗಬೇಕಿರುವ ತಿದ್ದುಪಡಿ ಮಸೂದೆಯ ಪ್ರಕಾರ ಮುಸ್ಲಿಂ ಪತಿ ತ್ರಿವಳಿ ತಲಾಖ್ ನೀಡಿದರೆ ಆತನ ವಿರುದ್ಧ ಪತ್ನಿ ಅಥವಾ ಯಾವುದೇ ಹತ್ತಿರದ ಬಂಧುಗಳು ದೂರು ನೀಡಬಹುದು, ಪತಿ ಸಂಧಾನಕ್ಕೆ ಬಂದರೆ ಅಥವಾ ರಾಜಿ ಮಾಡಿಕೊಳ್ಳಲು ಒಪ್ಪಿದರೆ ಆಕೆ ದೂರನ್ನು ವಾಪಸ್ ಪಡೆಯುವುದಕ್ಕೆ ಅವಕಾಶವಿದೆ, ಪತಿಯನ್ನು ತ್ರಿವಳಿ ತಲಾಖ್ ಪ್ರಕರಣದಲ್ಲಿ ಜೈಲಿಗಟ್ಟಬಹುದು ಮತ್ತು ಆತನಿಗೆ ಜಾಮೀನು ನೀಡಬೇಕೋ ಬೇಡವೋ ಎಂಬುದನ್ನು ಪತ್ನಿಯೊಂದಿಗೆ ಮಾತುಕತೆ ನಡೆಸಿಯೇ ಮ್ಯಾಜಿಸ್ಟ್ರೇಟ್ ತೀರ್ಪು ನೀಡಬೇಕು, ಮೌಖಿಕವಾಗಿ ತಲಾಖ್ ಹೇಳುವುದು ಅಥವಾ ವಾಟ್ಸಾಪ್, ಟೆಲಿಫೋನ್, ಪತ್ರ ಯಾವುದೇ ತಂತ್ರಜ್ಞಾನವನ್ನು ಬಳಸಿಕೊಂಡು ತಲಾಖ್ ಸಂದೇಶ ಕಳಿಸಿ ವಿಚ್ಛೇದನ ಪಡೆಯುವುದನ್ನೂ ಈ ಕಾಯ್ದೆ ಅಪರಾಧವೆಂದಿದೆ.