ಕಾನ್ಪುರ ರೈಲು ದುರಂತಕ್ಕೆ ಕಂಬನಿ ಮಿಡಿದ ಗಣ್ಯರು
ಭಾನುವಾರ ಮುಂಜಾನೆ ಸಂಭವಿಸಿದ ಕಾನ್ಪುರ ರೈಲು ದುರಂತಕ್ಕೆ ಪ್ರಧಾನಿ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನವದೆಹಲಿ, ನವೆಂಬರ್, 20: ಭಾನುವಾರ ಮುಂಜಾನೆ ಸಂಭವಿಸಿದ ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದರುಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
"ಪಾಟ್ನ-ಇಂದೋರ್ ಎಕ್ಸ್ ಪ್ರೆಸ್ ರೈಲು ದುರಂತ ಅತ್ಯಂತ ದಾರುಣ ಘಟನೆ. ಘಟನೆಯಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ". ಎಂದು ಅವರು ಟ್ವೀಟ್ ಮಾಡಿದ್ದಾರೆ.[ಕಾನ್ಪುರ ಬಳಿ ರೈಲು ದುರಂತ, ಸಾವಿನ ಸಂಖ್ಯೆ 91ಕ್ಕೇರಿಕೆ]
Prayers with those injured in the tragic train accident. I've spoken to @sureshpprabhu, who is personally monitoring the situation closely.
— Narendra Modi (@narendramodi) November 20, 2016
"ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು" ಅವರು ಹೇಳಿದ್ದಾರೆ.
I have spoken to DG NDRF and instructed him to rush NDRF teams to Pukhrayan. He is also leaving for Pukhrayan to oversee the rescue ops.
— Rajnath Singh (@rajnathsingh) November 20, 2016
ರೈಲು ದುರಂತದಲ್ಲಿ ಸಂಭವಿಸಿದ ಸಾವು ನೋವುಗಳು ತೀವ್ರ ದಃಖ ತಂದಿವೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುವಂತೆ ಎನ್ ಡಿ ಆರ್ ಎಫ್ ಪಡೆಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಟ್ವೀಟ್ ಮಾಡಿದ್ದಾರೆ.
Indore-Patna Rajendra Nagar Express train accident is unfortunate.Deep condolences to the bereaved families.We are monitoring the situation.
— ShivrajSingh Chouhan (@ChouhanShivraj) November 20, 2016
"ಇಂದೋರ್ ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತ ಅತ್ಯಂತ ದುರದೃಷ್ಟಕರ, ಮೃತಪಟ್ಟ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದೇನೆ. ನಾವು ಸಹ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
V sad to hear the news of train accident. Heartfelt condolences to families of deceased https://t.co/rQVsSmJ3oC
— Arvind Kejriwal (@ArvindKejriwal) November 20, 2016
"ರೈಲು ದುರಂತದ ತೀವ್ರ ವಿಷಾದ ಉಂಟು ಮಾಡಿದೆ. ಮೃತಪಟ್ಟ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತಿದ್ದೇನೆ" ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
T 2448 - Saddened beyond words, watching visuals of the Patna-Indore train accident .. prayers for the hurt and bereaved ! pic.twitter.com/Bm7w68lAXP
— Amitabh Bachchan (@SrBachchan) November 20, 2016
ಕಾನ್ಪುರದಲ್ಲಿ ನಡೆದ ರೈಲು ದುರಂತದ ವಿಚಾರ ತಿಳಿದು ಅತೀವ ದುಃಖವಾಗಿದೆ. ಮೃತಪಟ್ಟವರಿಗೆ ಮತ್ತು ಸಂತ್ರಸ್ತರಿಗೆ ತೀವ್ರ ಸಂತಾಪಗಳು ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಹ ಟ್ವೀಟ್ ಮಾಡಿದ್ದಾರೆ.