ಬೆಟ್ಟ ಕುರುಬ ಜನಾಂಗ ಎಸ್ಟಿಗೆ ಸೇರ್ಪಡೆ: ಪ್ರಲ್ಹಾದ್ ಜೋಶಿ ಪ್ರಕಟ, ಸಿದ್ದರಾಮಯ್ಯ ಸಂತಸ
ಬೆಂಗಳೂರು, ಸೆ.14: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ವಿಚಾರವಾಗಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕದ ಬೆಟ್ಟ ಕುರುಬ ಜನಾಂಗಕ್ಕೆ ಸೇರಿದ 12 ಜಾತಿಗಳನ್ನ ಪರಿಶಿಷ್ಟ ಪಂಗಡ ಸಮುದಾಯದ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.
ಕರ್ನಾಟಕ ಸರ್ಕಾರ ಮಾಡಿದ ಶಿಫಾರಸ್ಸನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ಕುರಿತಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಗಂಗಾ ಕಲ್ಯಾಣ ಯೋಜನೆಯಲ್ಲಿ ಅವ್ಯಹಾರ: ತನಿಖೆಗೆ ಸಿಎಂ ಬೊಮ್ಮಾಯಿ ಆದೇಶ
ಕರ್ನಾಟಕದ ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳ ಅಂಚಿನಲ್ಲಿ ಬೆಟ್ಟ ಕುರುಬ ಜನಾಂಗ ನೆಲೆಸಿತ್ತು. ಕಾರಣಾಂತರಗಳಿಂದ ಈ ಜನಾಂಗದವರನ್ನು ಒಕ್ಕಲೆಬ್ಬಿಸಲಾಗಿತ್ತು. ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಈ ಜನಾಂಗದವರು ಕಳೆದ 30 ವರ್ಷಗಳಿಂದ ಹೋರಾಡುತ್ತಿದ್ದರು ಎಂದಿದ್ದಾರೆ.
12 ಉಪ ಜಾತಿಗಳು ಎಸ್.ಟಿ ಸಮುದಾಯಕ್ಕೆ
"ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಾಗೂ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಬೆಟ್ಟ ಕುರುಬರು ವಾಸಿಸುತ್ತಿದ್ದರು. ಇವರನ್ನ ಕಾಡು ಕುರುಬರು ಎಂದು ಕರೆಯಲಾಗುತ್ತಿತ್ತು. ನಂತರದಲ್ಲಿ ಬೆಟ್ಟ ಕುರುಬರು ಎಂದು ಕರೆಯಲಾಗುತ್ತಿತ್ತು. ಇದೀಗ ಈ ಸಮುದಾಯಕ್ಕೆ ಸೇರಿದ 12 ಉಪ ಜಾತಿಗಳನ್ನು ಎಸ್.ಟಿ ಸಮುದಾಯಕ್ಕೆ ಸೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು, ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಮೀಸಲಾತಿಯ ಲಾಭ ಪಡೆದು ಬೆಟ್ಟ ಕುರುಬ ಸಮುದಾಯ ಸರ್ವತೋಮುಖ ಅಭಿವೃದ್ದಿ ಸಾಧಿಸಲಿ ಎಂದು ಹಾರೈಸಿದ್ದಾರೆ.
ಕಾಡು ಕುರುಬ ಜಾತಿ ಸೂಚಕಕ್ಕೆ ಸಮನಾರ್ಥ ಹೊಂದಿರುವ ಬೆಟ್ಟ ಕುರುಬ
"ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ಕೇಂದ್ರ ಸರ್ಕಾರದ ನಿರ್ಣಯವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಈ ಸಮುದಾಯದ ಬಹುಕಾಲದ ಬೇಡಿಕೆಯಂತೆ ನಮ್ಮ ಸರ್ಕಾರ ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು" ಎಂದಿದ್ದಾರೆ.
"ಆ
ಅಧ್ಯಯನದ
ವರದಿ
ಆಧಾರದಲ್ಲಿ
ಕಾಡು
ಕುರುಬ
ಜಾತಿ
ಸೂಚಕಕ್ಕೆ
ಸಮನಾರ್ಥ
ಹೊಂದಿರುವ
ಬೆಟ್ಟ
ಕುರುಬರನ್ನು
ಕೂಡಾ
ಪರಿಶಿಷ್ಟ
ಪಂಗಡಕ್ಕೆ
ಸೇರಿಸಬೇಕೆಂದು
ನಮ್ಮ
ಸರ್ಕಾರ
ಸಚಿವ
ಸಂಪುಟದಲ್ಲಿ
ತೀರ್ಮಾನಿಸಿ
ಕೇಂದ್ರ
ಸರ್ಕಾರಕ್ಕೆ
ಶಿಫಾರಸು
ಮಾಡಿತ್ತು.
ಸುಮಾರು
ಮೂರುವರೆ
ವರ್ಷಗಳ
ನಂತರ
ಕೇಂದ್ರ
ಸರ್ಕಾರ
ನಿರ್ಧಾರ
ಕೈಗೊಂಡಿದೆ"
ಎಂದು
ತಮ್ಮ
ಸರ್ಕಾರದ
ಅವಧಿಯ
ಕೆಲಸಗಳನ್ನು
ನೆನಪಿಸಿಕೊಂಡಿದ್ದಾರೆ.
ಮೀಸಲಾತಿಯ ಲಾಭ ಪಡೆದು ಸರ್ವತೋಮುಖ ಅಭಿವೃದ್ದಿ ಸಾಧಿಸಲಿ
"ಇಲ್ಲಿಯವರೆಗೆ ಮೀಸಲಾತಿ ಸೌಲಭ್ಯದಿಂದಲೇ ವಂಚಿತರಾಗಿದ್ದ ಬೆಟ್ಟ ಕುರುಬ ಸಮುದಾಯದ ಜನ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯ ಲಾಭ ಪಡೆದು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶ-ಪ್ರಾತಿನಿಧ್ಯ ಪಡೆದು ಬೆಳೆಯಲಿ ಎಂದು ಆಶಿಸುತ್ತೇನೆ" ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದ ಬೆಟ್ಟ ಕುರುಬ ಸಮುದಾಯವನ್ನಷ್ಟೇ ಅಲ್ಲದೆ ಬುಧವಾರ ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಛತ್ತೀಸ್ಗಢ ರಾಜ್ಯಗಳ ನಾಲ್ಕು ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹಿಮಾಚಲ ಪ್ರದೇಶ, ತಮಿಳುನಾಡು, ಛತ್ತೀಸ್ಗಢಕ್ಕೂ ಪ್ರಾಮುಖ್ಯತೆ
ಸಮುದಾಯಗಳನ್ನು ಸೇರಿಸುವ ಬೇಡಿಕೆಗಳು ದಶಕಗಳಿಂದ ಬಾಕಿ ಉಳಿದಿವೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಸೆಪ್ಟೆಂಬರ್ 14 ರಂದು ಸಚಿವ ಸಂಪುಟದಲ್ಲಿ ಘೋಷಿಸಿದರು.
ಹಿಮಾಚಲ ಪ್ರದೇಶದ ಸಿರ್ಮೂರ್ ಜಿಲ್ಲೆಯ ಟ್ರಾನ್ಸ್-ಗಿರಿ ಪ್ರದೇಶದ ಹಟ್ಟಿ ಬುಡಕಟ್ಟು, ತಮಿಳುನಾಡಿನ ನರಿಕೊರವನ್ ಮತ್ತು ಕುರಿವಿಕ್ಕರನ್ ಬೆಟ್ಟದ ಬುಡಕಟ್ಟುಗಳು ಮತ್ತು ಛತ್ತೀಸ್ಗಢದ ಬಿಂಜಿಯಾ ಸಮುದಾಯವನ್ನು ಜಾರ್ಖಂಡ್ ಮತ್ತು ಒಡಿಶಾದಲ್ಲಿ ಎಸ್ಟಿ ಎಂದು ಪಟ್ಟಿ ಮಾಡಲಾಗಿದೆ. ಆದರೆ, ಛತ್ತೀಸ್ಗಢದಲ್ಲಿ ಆ ಸಮುದಾಯವನ್ನು ಎಸ್ಟಿ ಎಂದು ಸೇರಿಸಲಾಗಿಲ್ಲ.
ಸಚಿವ ಸಂಪುಟವು ಛತ್ತೀಸ್ಗಢದಲ್ಲಿ, ಭರಿಯಾ (ಭೂಮಿಯಾ ಮತ್ತು ಭುಯಿಯಾನ್ ಸೇರಿದಂತೆ), ಗಧ್ವಾ (ಗಡ್ವಾ), ಧನ್ವರ್ (ಧನವಾರ್, ಧನುವಾರ್), ನಗೆಸಿಯಾ (ನಾಗಾಸಿಯಾ, ಕಿಸಾನ್), ಮತ್ತು ಪಾಂಡ್ (ಕೊಳ) ನಂತಹ ಬುಡಕಟ್ಟುಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ಅನುಮೋದಿಸಿದೆ.