ಪಟಾಕಿ ನಿಷೇಧ ತೆರವುಗೊಳಿಸಿ: ಸುಪ್ರೀಂ ಗೆ ಪಟಾಕಿ ವರ್ತಕರ ಮನವಿ
ನವದೆಹಲಿ, ಅಕ್ಟೋಬರ್ 13: ನವದೆಹಲಿಯಲ್ಲಿ ನವೆಂಬರ್ 1 ರವರೆಗೆ ಪಟಾಕಿ ನಿಷೇಧಿಸುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪಟಾಕಿ ವ್ಯಾಪಾರಿಗಳು ಹೂಡಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಕರ್ನಾಟಕದಲ್ಲೂ ಪಟಾಕಿ ನಿಷೇಧಿಸಬೇಕಾ? ಒನ್ ಇಂಡಿಯಾ ಓದುಗರು ಏನಂತಾರೆ?
"ಪಟಾಕಿ ವ್ಯಾಪಾರಕ್ಕೆ ನಮಗೆ ನೀಡಿದ ಪರವಾನಗಿಯನ್ನು ನಾವು ನವೀಕರಣ(ರಿನ್ಯೂವಲ್) ಮಾಡಿಕೊಂಡಿದ್ದೇವೆ. ಅಲ್ಲದೆ, ಈಗಾಘಲೇ ಸಾಕಷ್ಟು ಪಟಾಕಿಗಳನ್ನು ದಾಸ್ತಾನು ಮಾಡಿದ್ದೇವೆ. ಈಗ ಇವುಗಳ ಮಾರಾಟದ ಮೆಲೆ ನಿಷೇಧ ಹೇರಿದರೆ ನಮಗೆ ಬಹಳ ನಷ್ಟವಾಗುತ್ತದೆ. ಆದ್ದರಿಂದ ಈ ನಿಷೇಧವನ್ನು ತೆರವುಗೊಳಿಸಬೇಕು" ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. "
ದೆಹಲಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಹತೋಟಿಗೆ ತರಲು ಮತ್ತು ಪಟಾಕಿ ನಿಷೇಧದಿಂದ ಮಾಲಿನ್ಯ ಪ್ರಮಾಣ ಎಷ್ಟರ ಮಟ್ಟಿಗೆ ಕಡಿಮೆಯಾಗಬಲ್ಲದು ಎಂಬುದನ್ನು ಪತ್ತೆ ಮಾಡಲು ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದ್ದು, ಹಲವು ಪರಿಸರ ಪರ ಸಂಘಟನೆಗಳು ಇದನ್ನು ಸ್ವಾಗತಿಸಿದ್ದರೆ, ಮತ್ತಷ್ಟು ಜನ ವಿರೋಧಿಸಿದ್ದಾರೆ.