ಬಿಸಿಸಿಐಗೆ ಹಿನ್ನಡೆ, ಸಮಿತಿ ತನಿಖೆಗೆ ಸುಪ್ರೀಂ ತಡೆ
ನವದೆಹಲಿ, ಏ.22: ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಗಾಗಿ ಬಿಸಿಸಿಐ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ರವಿಶಾಸ್ತ್ರಿ ಅವರು ಬಿಸಿಸಿಐ ಸದಸ್ಯರಲ್ಲವೇ? ಅವರೇ ಹೇಗೆ ತನಿಖೆ ನಡೆಸಲು ಸಾಧ್ಯ? ಎಂಬ ಅಂಶಗಳನ್ನು ಸುಪ್ರೀಂಕೋರ್ಟ್ ಪರಿಗಣಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಐಪಿಎಲ್ ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದ ತನಿಖೆಗೆ ಮಾಜಿ ಕ್ರಿಕೆಟರ್ ರವಿಶಾಸ್ತ್ರಿ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯನ್ನು ಬಿಸಿಸಿಐ ಇತ್ತೀಚೆಗೆ ನೇಮಿಸಿತ್ತು.ಆದರೆಮ್ ಬಿಸಿಸಿಐ ನೇಮಿಸಿದ ಸಮಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಮಾಜಿ
ಕ್ರಿಕೆಟರ್
ರವಿಶಾಸ್ತ್ರಿ,
ನಿವೃತ್ತ
ಸಿಬಿಐ
ಮುಖ್ಯಸ್ಥ
ಶಿವಲಾಲ್
ರಾಘವನ್
ಮತ್ತು
ಕೋಲ್ಕತಾ
ಹೈಕೋರ್ಟ್
ನ
ನಿವೃತ್ತ
ನ್ಯಾಯಮೂರ್ತಿ
ಜೆಎನ್
ಪಟೇಲ್
ಅವರನ್ನೊಳಗೊಂಡ
ಸಮಿತಿಯ
ತನಿಖೆಗೆ
ನ್ಯಾಯಾಲಯ
ಅಸಮ್ಮತಿ
ವ್ಯಕ್ತಪಡಿಸಿದೆ.
ಅಲ್ಲದೆ
ಐಪಿಎಲ್
ಸ್ಪಾಟ್
ಫಿಕ್ಸಿಂಗ್
ಪ್ರಕರಣ
ಮತ್ತು
ಬೆಟ್ಟಿಂಗ್
ಪ್ರಕರಣಗಳಿಗೆ
ಸಂಬಂಧಿಸಿದಂತೆ
ಈ
ಹಿಂದೆ
ತನಿಖೆ
ನಡೆಸಿದ್ದ
ನಿವೃತ್ತ
ನ್ಯಾಯಮೂರ್ತಿ
ಮುಕುಲ್
ಮುದ್ಗಲ್
ಅವರ
ನೇತೃತ್ವದ
ತನಿಖಾ
ಸಮಿತಿಯತ್ತ
ನ್ಯಾಯಾಲಯ
ಒಲವು
ವ್ಯಕ್ತಪಡಿಸಿದ್ದು,
ಪ್ರಕರಣದ
ಸಂಪೂರ್ಣ
ತನಿಖೆ
ನಡೆಸಲು
ನಿಮಗೆ
ಸಾಧ್ಯವೇ
ಎಂದು
ಕೇಳಿದೆ.
ಬಿಸಿಸಿಐ ಪ್ರಸ್ತಾಪಿಸಿದ್ದ ತನಿಖಾ ಸಮಿತಿಯಲ್ಲಿದ್ದ ರವಿಶಾಸ್ತ್ರಿ ಬಿಸಿಸಿಐನ ಆಡಳಿತ ಮಂಡಳಿಯಲ್ಲಿ ಇಲ್ಲದೇ ಹೋದರೂ ಕೂಡ ಸಂಸ್ಥೆಯಲ್ಲಿ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ. ಅಂತೆಯೇ ನಿವೃತ್ತ ನ್ಯಾಯಮೂರ್ತಿ ಜೆಎನ್ ಪಟೇಲ್ ಅವರು, ಬಿಸಿಸಿಐ ಉಪಾಧ್ಯಕ್ಷ ಮತ್ತು ಮಧ್ಯಂತರ ಮುಖ್ಯಸ್ಥರಾಗಿದ್ದಾರೆ. ಶಿವಲಾಲ್ ರಾಘವನ್ ಅವರು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಕ್ರಿಕೆಟ್ ಕ್ಲಬ್ ನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿಯೇ ಸುಪ್ರೀಂ ಕೋರ್ಟ ಈ ಮೂವರನ್ನೊಳಗೊಂಡ ತನಿಖಾ ಸಮಿತಿಗೆ ಅಸಮ್ಮತಿ ವ್ಯಕ್ತಪಡಿಸಿದೆ.
ಈ ಹಿಂದೆ 2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ರನ್ನೊಳಗೊಂಡ 11 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಸುಪ್ರೀಂಕೋರ್ಟ್ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ಸಮಿತಿ ರಚನೆಗೆ ಸದಸ್ಯರನ್ನು ಸೂಚಿಸುವಂತೆ ಬಿಸಿಸಿಐಗೆ ಹೇಳಿತ್ತು. ಅದರಂತೆ ಬಿಸಿಸಿಐ ರವಿಶಾಸ್ತ್ರಿ, ಶಿವಲಾಲ್ ರಾಘವನ್ ಮತ್ತು ಜೆಎನ್ ಪಟೇಲ್ ರ ಹೆಸರನ್ನು ಶಿಫಾರಸ್ಸು ಮಾಡಿತ್ತು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೆ ಹಾಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ತಾತ್ಕಾಲಿಕವಾಗಿ ಸುನೀಲ್ ಗವಾಸ್ಕರ್ ಅಥವಾ ಹಿರಿಯ ಕ್ರಿಕೆಟಿಗರು ಒಬ್ಬರನ್ನು ಆ ಸ್ಥಾನಕ್ಕೆ ನೇಮಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ ಸುನಿಲ್ ಗವಾಸ್ಕರ್ ಅವರು ಐಪಿಎಲ್ ಹಾಗೂ ಬಿಸಿಸಿಐ ಸಾರಥ್ಯ ವಹಿಸಿಕೊಂಡಿದ್ದರು.