ಅಮ್ರಪಾಲಿ ಹೋಟೆಲ್ ಸೇರಿದಂತೆ ಆಸ್ತಿ ಜಪ್ತಿಗೆ ಸುಪ್ರೀಂ ಆದೇಶ
ನವದೆಹಲಿ, ಡಿಸೆಂಬರ್ 06: ಆಮ್ರಪಾಲಿ ಸಮೂಹ ಸಂಸ್ತೆಯ ಐಷಾರಾಮಿ ಹೋಟೆಲ್, ಸಿನಿಮಾ ಹಾಲ್, ಮಾಲ್, ಕಾರ್ಖಾನೆ ಸೇರಿದಂತೆ ಸಮಸ್ತ ಆಸ್ತಿಯನ್ನು ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ನೋಯ್ಡಾದಲ್ಲಿರುವ ಕಚೇರಿ ಸೇರಿದಂತೆ ದೇಶದೆಲ್ಲೆಡೆ ಇರುವ ಬ್ರ್ಯಾಂಚ್ ಗಳನ್ನು ಬಂದ್ ಮಾಡುವಂತೆ ಸಾಲ ಮರುಪಾವತಿ ನ್ಯಾಯಾಧೀಕರಣ(ಡಿಆರ್ ಟಿ) ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮನೆ ಪಡೆಯಲು ಹಣ ಪಾವತಿಸಿದವರಿಗೆ ಡಿಸೆಂಬರ್ 10ರೊಳಗೆ ಹಣ ಹಿಂತಿರುಗಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ. ಎಲ್ಲಾ ಆಸ್ತಿಯನ್ನು ಹರಾಜು ಹಾಕಿ ಸಂತ್ರಸ್ತರಿಗೆ ಹಣ ವಿತರಿಸುವ ಹಾಗೂ ಬಾಕಿ ಸಾಲ ಪಾವರಿ ಮಾಡಿಸಿಕೊಳ್ಳುವ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
42ಸಾವಿರ ಮನೆ ಖರೀದಿದಾರರಿಗೆ ವಂಚಿಸಿರುವ ಆರೋಪ ಆಮ್ರಪಾಲಿ ಸಂಸ್ಥೆ ಮೇಲಿದೆ. ಖರೀದಿದಾರರಿಂದ ಪಡೆದ ಸುಮಾರು 3,000 ಕೋಟಿ ರು ಮೊತ್ತವನ್ನು ಬೇರೆ ಉದ್ದೇಶಕ್ಕೆ ಸಂಸ್ಥೆ ಬಳಸಿರುವುದಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಆಮ್ರಪಾಲಿ ಗ್ರೂಪ್ ಎಂಡಿ ಅನಿಲ್ ಶರ್ಮ ಹಾಗೂ ನಿರ್ದೇಶಕರಿಗೆ ನ್ಯಾ. ಅರುಣ್ ಮಿಶ್ರಾ, ಯು ಯು ಲಲಿತ್ ಅವರಿದ್ದ ನ್ಯಾಯಪೀಠವು ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ಉತ್ತರಿಸಲು ಸೂಚಿಸಿದೆ.Supreme Court orders attachment of Amrapali's 5-star hotel, malls, cinema hall, factories
Continuing its crackdown on the embattled Amrapali Group, the Supreme Court on Wednesday ordered attachment and sale of the realty firm's five-star hotel, cinema hall, malls and factories across India, calling it "a worst kind of cheater" and "a perfect liar" for not complying with the court's direction.
Supreme Court orders attachment of Amrapali's 5-star hotel, malls, cinema hall, factories
supreme court, hotel, fraud, finance news, ಸುಪ್ರೀಂಕೋರ್ಟ್, ಹೋಟೆಲ್, ವಂಚನೆ, ವಾಣಿಜ್ಯ
ಅಮ್ರಪಾಲಿ ಹೋಟೆಲ್ ಸೇರಿದಂತೆ ಆಸ್ತಿ ಜಪ್ರಿಗೆ ಸುಪ್ರೀಂ ಆದೇಶ
ನವದೆಹಲಿ, ಡಿಸೆಂಬರ್ 06: ಆಮ್ರಪಾಲಿ ಸಮೂಹ ಸಂಸ್ತೆಯ ಐಷಾರಾಮಿ ಹೋಟೆಲ್, ಸಿನಿಮಾ ಹಾಲ್, ಮಾಲ್, ಕಾರ್ಖಾನೆ ಸೇರಿದಂತೆ ಸಮಸ್ತ ಆಸ್ತಿಯನ್ನು ಜಪ್ತಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ನೋಯ್ಡಾದಲ್ಲಿರುವ ಕಚೇರಿ ಸೇರಿದಂತೆ ದೇಶದೆಲ್ಲೆಡೆ ಇರುವ ಬ್ರ್ಯಾಂಚ್ ಗಳನ್ನು ಬಂದ್ ಮಾಡುವಂತೆ ಸಾಲ ಮರುಪಾವತಿ ನ್ಯಾಯಾಧೀಕರಣ(ಡಿಆರ್ ಟಿ) ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಮನೆ ಪಡೆಯಲು ಹಣ ಪಾವತಿಸಿದವರಿಗೆ ಡಿಸೆಂಬರ್ 10ರೊಳಗೆ ಹಣ ಹಿಂತಿರುಗಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ. ಎಲ್ಲಾ ಆಸ್ತಿಯನ್ನು ಹರಾಜು ಹಾಕಿ ಸಂತ್ರಸ್ತರಿಗೆ ಹಣ ವಿತರಿಸುವ ಹಾಗೂ ಬಾಕಿ ಸಾಲ ಪಾವರಿ ಮಾಡಿಸಿಕೊಳ್ಳುವ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
42ಸಾವಿರ ಮನೆ ಖರೀದಿದಾರರಿಗೆ ವಂಚಿಸಿರುವ ಆರೋಪ ಆಮ್ರಪಾಲಿ ಸಂಸ್ಥೆ ಮೇಲಿದೆ. ಖರೀದಿದಾರರಿಂದ ಪಡೆದ ಸುಮಾರು 3,000 ಕೋಟಿ ರು ಮೊತ್ತವನ್ನು ಬೇರೆ ಉದ್ದೇಶಕ್ಕೆ ಸಂಸ್ಥೆ ಬಳಸಿರುವುದಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ.
ಆಮ್ರಪಾಲಿ ಗ್ರೂಪ್ ಎಂಡಿ ಅನಿಲ್ ಶರ್ಮ ಹಾಗೂ ನಿರ್ದೇಶಕರಿಗೆ ನ್ಯಾ. ಅರುಣ್ ಮಿಶ್ರಾ, ಯು ಯು ಲಲಿತ್ ಅವರಿದ್ದ ನ್ಯಾಯಪೀಠವು ನೋಟಿಸ್ ನೀಡಿದ್ದು, 24 ಗಂಟೆಯೊಳಗೆ ಉತ್ತರಿಸಲು ಸೂಚಿಸಿದೆ.