ದೆಹಲಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೆಬಲ್ ಸಾವು
ನವದೆಹಲಿ, ಫೆಬ್ರವರಿ 24: ದೆಹಲಿಯ ಗೋಕುಲ್ಪುರಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ, ಕಲ್ಲುತೂರಾದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ.
ಕಾನ್ಸ್ಟೆಬಲ್ ರತನ್ ಲಾಲ್ ಮೃತರು, ಗೋಕುಲ್ಪುರಿಯಲ್ಲಿ ನಡೆದ ಕಲ್ಲು ತೂರಾದಲ್ಲಿ ಡಿಸಿಪಿ ಶಾಹ್ದರಾ , ಅಮಿತ್ ಶರ್ಮಾ ಕೂಡ ಗಾಯಗೊಂಡಿದ್ದಾರೆ.
ಸಿಎಎ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಕರೆದ USCIRF
ಪ್ರತಿಭಟನಾಕಾರರು ಭಜನ್ಪುರ ಪ್ರದೇಶದಲ್ಲಿರುವ ಪೆಟ್ರೋಲ್ ಪಂಪ್ಗೂ ಕೂಡ ಬೆಂಕಿ ಹಚ್ಚಿದ್ದಾರೆ. ಪೆಟ್ರೋಲ್ ಪಂಪ್ನ ಬೆಂಕಿಯಿಂದ ಹಲವರು ಗಾಯಗೊಂಡಿದ್ದಾರೆ.
ನವದೆಹಲಿಯ
ಮೌಜ್ಪುರದಲ್ಲಿ
ಪೌರತ್ವ
ತಿದ್ದುಪಡಿ
ಕಾಯ್ದೆ
ವಿರೋಧಿ
ಹಾಗೂ
ಪರರ
ನಡುವೆ
ಕಲ್ಲು
ತೂರಾಟ
ನಡೆದಿತ್ತು.
ಈ
ಪ್ರತಿಭಟನಾಕಾರರನ್ನು
ಚದುರಿಸಲು
ಟಿಯರ್
ಗ್ಯಾಸ್
ಬಳಕೆ
ಮಾಡಲಾಗಿತ್ತು.
ಬಿಜೆಪಿ
ಮುಖಂಡ
ಕಪಿಲ್
ಮಿಶ್ರಾ
ಮೌಜ್ಪುರ
ಚೌಕಕ್ಕೆ
ಭೇಟಿ
ನೀಡಿದ
ಸಂದರ್ಭದಲ್ಲಿ
ಫೆಬ್ರವರಿ
23ರಂದು
ಕೂಡ
ಪ್ರತಿಭಟನೆ
ನಡೆದಿತ್ತು.
ಮೌಜ್ಪುರ್ ಪ್ರದೇಶದಲ್ಲಿ ಈಗಾಗಲೇ ಸಿಎಎ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಜಫ್ರಾಬಾದ್ನಲ್ಲಿ ವ್ಯಕ್ತಿಯೊಬ್ಬ ಎಂಟು ಸುತ್ತು ಗುಂಡು ಹಾರಿಸಿದ್ದಾನೆ. ಕಂಟ್ರಿ ಮೇಡ್ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ.