ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಗಳಿಗೆ ಭಾರತ ರತ್ನ ನೀಡಿ: ಸಂಸತ್‌ನಲ್ಲಿ ರಾಜ್ಯ ಸಂಸದರ ಒತ್ತಾಯ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂದು ಸಂಸತ್‌ನಲ್ಲಿ ಇಂದು ರಾಜ್ಯದ ಸಂಸದರು ಒತ್ತಾಯ ಮಾಡಿದರು.

ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ತುಮಕೂರಿನ ಸಂಸದ ಮುದ್ದಹನುಮೇಗೌಡ ಅವರು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಿದ್ದರೂ ಸಹ ಕೇಂದ್ರವು ಶ್ರೀಗಳಿಗೆ ಭಾರತ ರತ್ನ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದಗಂಗಾ ಶ್ರೀಗಳಿಗೆ ಸಿಗದ ಭಾರತ ರತ್ನ, ಕಾಂಗ್ರೆಸ್ ಪ್ರತಿಭಟನೆ ಸಿದ್ದಗಂಗಾ ಶ್ರೀಗಳಿಗೆ ಸಿಗದ ಭಾರತ ರತ್ನ, ಕಾಂಗ್ರೆಸ್ ಪ್ರತಿಭಟನೆ

ಕೋಟ್ಯಂತರ ಭಕ್ತಾಧಿಗಳನ್ನು ಹೊಂದಿರುವ ಶ್ರೀಗಳಿಗೆ ಭಾರತ ರತ್ನ ನೀಡದೆ ಸರ್ಕಾರವು ಅವರ ಭಕ್ತಾಧಿಗಳಿಗೆ ನಿರಾಸೆ ಉಂಟು ಮಾಡಿದೆ. ಕರ್ನಾಟಕದ ಸರ್ಕಾರದ ಮನವಿಯನ್ನು ತಿರಸ್ಕರಿಸಿ ಅವಮಾನಿಸಿದೆ ಎಂದು ಅವರು ಹೇಳಿದರು.

State MPs demand to give Bharat Ratna to Shivakumara Swami

ಮುದ್ದಹನುಮೇಗೌಡ ಅವರು ಮಾತನಾಡುವ ಸಮಯ ಅವರನ್ನು ಚಾಮರಾಜನಗರ ಸಂಸದ ಧೃವನಾರಾಯಣ್​​ ಹಾಗೂ ಚಿತ್ರದುರ್ಗ ಸಂಸದ ಬಿಎನ್​ ಚಂದ್ರಪ್ಪ ಅವರು ಸೇರಿಕೊಂಡು ಬೆಂಬಲ ಸೂಚಿಸಿದರು.

ಸಾಧು-ಸಂತರ ಕೊಡುಗೆ ಈ ದೇಶಕ್ಕಿಲ್ಲವಾ? ಅವರಿಗೇಕೆ ಭಾರತ ರತ್ನ ಇಲ್ಲ?: ರಾಮ್ ದೇವ್ ಸಾಧು-ಸಂತರ ಕೊಡುಗೆ ಈ ದೇಶಕ್ಕಿಲ್ಲವಾ? ಅವರಿಗೇಕೆ ಭಾರತ ರತ್ನ ಇಲ್ಲ?: ರಾಮ್ ದೇವ್

ಕೊಲ್ಕತ್ತ ಸಿಬಿಐ-ಪೊಲೀಸ್ ವಿಷಯದ ಗಲಾಟೆಯ ನಡುವೆ ರಾಜ್ಯದ ಸಂಸದರ ಮನವಿಗಳ ಬಗ್ಗೆ ಯಾರೂ ಹೆಚ್ಚು ಗಮನ ವಹಿಸಲಿಲ್ಲ.

ಭಾರತ ರತ್ನದ ಸುತ್ತಾ ಸುತ್ತಿಕೊಂಡಿರುವ ವಿವಾದಗಳುಭಾರತ ರತ್ನದ ಸುತ್ತಾ ಸುತ್ತಿಕೊಂಡಿರುವ ವಿವಾದಗಳು

ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ಮುಖಂಡರು, ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯ ಮಾಡಿದ್ದರೂ ಆದರೂ ಸಹ ಈ ಬಾರಿ ಶ್ರೀಗಳಿಗೆ ಭಾರತ ರತ್ನ ನೀಡಲಾಗಿಲ್ಲ.

English summary
State MP's demand to give Bharat Ratna to Shivakumara Swami. Tumkur MP Muddahanumegowda talked in Lok Sabha today and ask central government to give Bharat Ratna to Shivakumara Swami.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X