'ಮಧುಮೇಹ ಕಡಿಮೆಯಾಗಬೇಕೆ? ಹಾಗಾದರೆ ಸಂಸ್ಕೃತದಲ್ಲಿ ಮಾತಾಡಿ'
Recommended Video
ನವದೆಹಲಿ, ಡಿಸೆಂಬರ್ 13: 'ಪ್ರತಿದಿನ ಮಾತನಾಡುವಾಗ ಸಂಸ್ಕೃತವನ್ನು ಬಳಸಿದರೆ ಜನರು ಮಧುಮೇಹದಿಂದ ದೂರವಿರಬಹುದು ಹಾಗೂ ಮನುಷ್ಯನ ನರ ಮಂಡಲ ಉತ್ತಮವಾಗಿಲಿದೆ ಕೊಬ್ಬಿನಿಂದಲೂ ಮುಕ್ತಿ ಪಡೆಯಬಹುದು' ಈ ವಿಷಯನ್ನು ಯಾವುದೇ ವಿಶ್ವವಿದ್ಯಾಲಯದ ಸಂಶೋಧನೆ ಬಹಿರಂಗ ಪಡಿಸಿಲ್ಲ.
ಬದಲಾಗಿ ಬಿಜೆಪಿ ಸಂಸದ ಗಣೇಶ್ ಸಿಂಗ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಸಂಸ್ಕೃತವು ವಿಶಿಷ್ಟ ಭಾಷೆಯಾಗಿದ್ದು, ಜಗತ್ತಿನ ಶೇ.97 ಭಾಷೆಗಳಿಗೆ ಮೂಲ ಪ್ರೇರಣೆಯಾಗಿದೆ.
ನೀವು ಕುಳ್ಳಗಿದ್ದರೆ ನಿಮಗೆ ಟೈಪ್2 ಮಧುಮೇಹ ರಿಸ್ಕ್ ಜಾಸ್ತಿಯಂತೆ
ಇಂಗ್ಲಿಷ್ ಹಾಗೂ ಇಸ್ಲಾಮಿಕ್ ಭಾಷೆಗಳಿಗೂ ಸಂಸ್ಕೃತವೇ ಮೂಲವಾಗಿದೆ. ನಾಸಾ ಕೂಡ ಕಂಪ್ಯೂಟರ್ನಲ್ಲಿ ಸಂಸ್ಕೃತ ಬಳಕೆಗೆ ಪ್ರಯತ್ನಿಸುತ್ತಿದೆ.ಹೀಗಾಗಿ ಜನರು ತಮ್ಮ ದೈನಂದಿಕ ಜೀವನದಲ್ಲಿ ಸಂಸ್ಕೃತವನ್ನು ಬಳಸಿದರೆ ಕೆಲಸ ರೋಗಗಳಿಂದಲೂ ದೂರವಿರಬಹುದು ಎಂಬ ಹೇಳಿಕೆಯನ್ನು ಗಣೇಶ್ ಸಿಂಗ್ ನೀಡಿದ್ದಾರೆ.
ಆದರೆ ಗಣೇಶ್ ಸಿಂಗ್ ಅವರು ಸಂಸ್ಕೃತ ಹಾಗೂ ಮಧುಮೇಹಕ್ಕಿರುವ ಸಂಬಂಧವನ್ನು ವಿವರಿಸಿಲ್ಲ, ಬಿಜೆಪಿ ಸಂಸದನ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.
ದೇಶದಲ್ಲಿ ಮೊದಲ ಬಾರಿಗೆ ಸಂಸ್ಕೃತ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದಾಗ ಈ ಚರ್ಚೆ ನಡೆಯಿತು. ಚರ್ಚೆ ಬಳಿಕ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಆರಂಭಕ್ಕೆ ಲೋಕಸಭೆ ಅನುಮತಿಯನ್ನೂ ಕೂಡ ನೀಡಿದೆ.