"ದೆಹಲಿಯ ನಡುರಸ್ತೆಯಲ್ಲಿ ಗನ್ ಹಿಡಿದು ಗುಂಡು ಹಾರಿಸಿದವನ ಬಂಧನವಾಗಿಲ್ಲ"
"ದೆಹಲಿಯ ನಡುರಸ್ತೆಯಲ್ಲಿ ಗನ್ ಹಿಡಿದು ಗುಂಡು ಹಾರಿಸಿದವನ ಬಂಧನವಾಗಿಲ್ಲ"
ನವದೆಹಲಿ,
ಫೆಬ್ರವರಿ.27:
ರಾಷ್ಟ್ರ
ರಾಜಧಾನಿಯಲ್ಲಿ
ಒಂದು
ಕಡೆ
ಹೋರಾಟ
ನಡೆಯುತ್ತಿದ್ದರೆ
ಇನ್ನೊಂದು
ಕಡೆಯ
ನಡುರಸ್ತೆಯಲ್ಲಿ
ನಿಂತು
ಎಂಟು
ಸುತ್ತು
ಗಾಳಿಯಲ್ಲಿ
ಗುಂಡು
ಹಾರಿಸಿದ
ವ್ಯಕ್ತಿಯು
ಇಂದಿಗೂ
ತಲೆ
ತಪ್ಪಿಸಿಕೊಂಡು
ತಿರುಗಾಡುತ್ತಿದ್ದಾರೆ.
ಕಳೆದ
ಫೆಬ್ರವರಿ.24ರಂದು
ನಡೆದ
ಘಟನೆಗೆ
ಸಂಬಂಧಿಸಿದಂತೆ
ಆರೋಪಿಯನ್ನು
ದೆಹಲಿ
ಪೊಲೀಸರು
ಇದುವರೆಗೂ
ಬಂಧಿಸಿಲ್ಲ
ಎಂದು
ಮೂಲಗಳ
ಪ್ರಕಾರ
ತಿಳಿದು
ಬಂದಿದೆ.
ಘಟನೆ
ನಡೆದ
ಮರುದಿನವೇ
ಆರೋಪಿಯ
ಹೆಸರು
ಶಾರೂಕ್
ಖಾನ್
ಎಂದು
ಪೊಲೀಸರು
ಪತ್ತೆ
ಮಾಡಿದ್ದರು.
ದೆಹಲಿ
ಗಲಭೆ
ಸಾವಿನ
ಸಂಖ್ಯೆ
38;
ತನಿಖೆ
ಎಸ್ಐಟಿಗೆ
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿ
ಪರ
ಮತ್ತು
ವಿರೋಧಿ
ಗುಂಪುಗಳ
ನಡುವೆ
ಕಲ್ಲುತೂರಾಟ
ನಡೆದ
ಸಂದರ್ಭದಲ್ಲಿ
ಕೆಂಪು
ಟೀ-ಶರ್ಟ್
ತೊಟ್ಟುಕೊಂಡಿದ್ದ
ಶಾರೂಕ್
ಎಂಬ
ವ್ಯಕ್ತಿ
ಗಾಳಿಯಲ್ಲಿ
ಎಂಟು
ಸುತ್ತು
ಫೈರಿಂಗ್
ನಡೆಸಿದ್ದನು.
38
ಮಂದಿ
ಸಾವು,
ಎಸ್ಐಟಿಗೆ
ಹೆಗಲಿಗೆ
ತನಿಖೆ:
ದೆಹಲಿಯ
ಈಶಾನ್ಯ
ಭಾಗದಲ್ಲಿ
ಆರಂಭವಾದ
ಹಿಂಸಾಚಾರ
ಇದೀಗ
ಕೊಂಚ
ಹತೋಟಿಗೆ
ಬಂದಿದೆ.
ಇದರ
ಮಧ್ಯೆ
ಸಾವಿನ
ಸಂಖ್ಯೆ
38ಕ್ಕೆ
ಏರಿಕೆಯಾಗಿದ್ದು,
ಗುರು
ತೇಜ್
ಬಹದೂರ್
ಆಸ್ಪತ್ರೆಯಲ್ಲಿ
34,
ಲೋಕನಾಯಕ
ಜಯಪ್ರಕಾಶ್
ನಾರಾಯಣ್
ಆಸ್ಪತ್ರೆಯಲ್ಲಿ
3
ಮತ್ತು
ಜಗ
ಪರ್ವೇಶ್
ಚಂದೇರ್
ಆಸ್ಪತ್ರೆಯಲ್ಲಿ
ಒಬ್ಬರು
ಪ್ರಾಣ
ಬಿಟ್ಟಿರುವ
ಬಗ್ಗೆ
ವರದಿಯಾಗಿದೆ.
ಇನ್ನು,
200ಕ್ಕೂ
ಅಧಿಕ
ಮಂದಿ
ಗಾಯಗೊಂಡಿದ್ದು,
ಆಸ್ಪತ್ರೆಯಲ್ಲಿ
ಚಿಕಿತ್ಸೆಯನ್ನು
ಮುಂದುವರಿಸಲಾಗಿದೆ.
ಕಳೆದ
ನಾಲ್ಕು
ದಿನಗಳ
ಕಾಲ
ರಾಷ್ಟ್ರ
ರಾಜಧಾನಿಯಲ್ಲಿ
ನಡೆದ
ಹಿಂಸಾಚಾರದ
ಪ್ರಕರಣದ
ವಿಚಾರಣೆ
ನಡೆಸಲು
ಎರಡು
ವಿಶೇಷ
ತನಿಖಾ
ತಂಡ(SIT)ವನ್ನು
ರಚನೆ
ಮಾಡಲಾಗಿದೆ.