ಮಹಾರಾಷ್ಟ್ರ ವಿಶ್ವಾಸ ಮತದಲ್ಲಿ ಗೆಲುವು ನಮ್ಮದೇ: ಸೋನಿಯಾ ಗಾಂಧಿ
ನವದೆಹಲಿ, ನವೆಂಬರ್ 26: ಮಹಾರಾಷ್ಟ್ರದಲ್ಲಿ ವಿಶ್ವಾಸಮತ ಯಾಚನೆಗೆ 24 ಗಂಟೆಗಳ ಗಡುವು ನೀಡಿದ ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸಮತದಲ್ಲಿ ಗೆಲುವು ನಮದೇ ಎಂದು ಹೇಳಿದ್ದಾರೆ.
ಶರದ್ ಪವಾರ್ ಅವರ ನ್ಯಾಷನಾಲಿಸ್ಟ್ ಕಾಂಗ್ರೆಸ್ ಪಕ್ಷ, ಶಿವಸೇನಾ ಹಾಗೂ ಕಾಂಗ್ರೆಸ್ ಸೇರಿ ಉತ್ತಮ ಸರ್ಕಾರವನ್ನು ಕಟ್ಟುತ್ತೇವೆ ಎಂದು ಸೋನಿಯಾ ಗಾಂಧಿ ಭರವಸೆ ನೀಡಿದ್ದಾರೆ.
ಮಹಾ ಸಿಎಂ ದೇವೇಂದ್ರ ವಿಶ್ವಾಸಮತ ಯಾಚನೆ ಮುಹೂರ್ತ ಫಿಕ್ಸ್
ಮಹಾರಾಷ್ಟ್ರದಲ್ಲಿ
145
ಮತಗಳು
ಬೇಕು,
162
ಶಾಸಕರು
ನಮಗೆ
ಬೆಂಬಲ
ನೀಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ
ಸರ್ಕಾರ
ರಚನೆ
ಮಾಡುವ
ವಿಶ್ವಾಸ
ನಮಗಿದೆ
ಎಂದರು.
ಒಂದೊಮ್ಮೆ
ವಿಶ್ವಾಸಮತ
ಯಾಚನೆ
ಮಾಡುವುದು
ವಿಳಂಬವಾದರೆ
ಮತ್ತೆ
ಕುದುರೆ
ವ್ಯಾಪಾರ
ಮಾಡುವ
ಎಲ್ಲಾ
ಸಾಧ್ಯತೆಗಳಿವೆ
24
ಗಂಟೆಗಳಲ್ಲಿ
ವಿಶ್ವಾಸಮತ
ಯಾಚನೆ
ನಡೆದರೆ
ಉತ್ತಮ
ಎಂದು
ಹೇಳಿದ್ದಾರೆ.
ಬುಧವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆ ಮಾಡಬೇಕಿದೆ. ತಕ್ಷಣವೇ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಸೇರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿತ್ತು.
ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ನಡುವೆ ಇದ್ದ ಗೊಂದಲದಿಂದಾಗಿ ರಾಷ್ಟ್ರಪತಿ ಆಡಳಿತವಿತ್ತು. ಬಳಿಕ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಸೇರಿ ತಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿ ರಾಜ್ಯಪಾಲರಲ್ಲಿ ಮನವಿ ಮಾಡಿದ್ದರು ಬಳಿಕ ರಾಜ್ಯಪಾಲರು ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು.