ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆ ಶಿವಕುಮಾರ್ ಭೇಟಿ ಮಾಡದೆ ಹೊರಟ ಸೋನಿಯಾ: ಕಾರಣಗಳು

|
Google Oneindia Kannada News

Recommended Video

ಜೈಲೆಗೆ ಹೋದ್ರು ಡಿಕೆಶಿಯನ್ನು ಭೇಟಿ ಮಾಡದ ಸೋನಿಯಾ ಗಾಂಧಿ | Oneindia Kannada

ನವದೆಹಲಿ, ಸೆಪ್ಟೆಂಬರ್ 23: ಡಿಕೆ ಶಿವಕುಮಾರ್ ಬೆಂಬಲವಾಗಿ ನಾನಿದ್ದೇನೆ ಎಂದಿದ್ದ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ಬಂದರೂ ಅವರನ್ನು ಭೇಟಿ ಮಾಡದೆ ಹಿಂದಿರುಗಿದ್ದಾರೆ.

ತಿಹಾರ್ ಜೈಲಲ್ಲಿರುವ ಕಾಂಗ್ರೆಸ್ ನಾಯಕರ ಭೇಟಿಗೆ ಹೊರಟ ಸೋನಿಯಾತಿಹಾರ್ ಜೈಲಲ್ಲಿರುವ ಕಾಂಗ್ರೆಸ್ ನಾಯಕರ ಭೇಟಿಗೆ ಹೊರಟ ಸೋನಿಯಾ

ಒಂದೇ ಬಾರಿಗೆ ಒಬ್ಬರನ್ನು ಮಾತ್ರ ಭೇಟಿ ಮಾಡಲು ತಿಹಾರ್ ಜೈಲಿನಲ್ಲಿ ಅವಕಾಶ ವಿರುವುದರಿಂದ ಸೋನಿಯಾ ಗಾಂಧಿ ಕೇವಲ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಇನ್ನೊಂದು ಬಾರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸೋನಿಯಾ ಗಾಂಧಿಯವರು ತಿಹಾರ್ ಜೈಲಿಗೆ ಭೇಟಿ ನೀಡಿದ್ದರು. ಆದರೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರನ್ನು ಮಾತ್ರ ಭೇಟಿ ಮಾಡಿ ಹಿಂದಿರುಗಿದ್ದಾರೆ. ಅದೇ ಜೈಲಿನಲ್ಲಿ ಡಿಕೆ ಶಿವಕುಮಾರ್ ಇದ್ದರೂ ಕೂಡ ಅವರನ್ನು ಭೇಟಿಯಾಗಿಲ್ಲ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಕಾರಣವೇನು ಎಂಬುದನ್ನು ನೋಡೋಣ.

ಚಿದಂಬರಂ ಕೇಂದ್ರ ಸಚಿವರಾಗಿದ್ದರು, ಡಿಕೆಶಿ ರಾಜ್ಯ ಸಚಿವರಾಗಿದ್ದವರು

ಚಿದಂಬರಂ ಕೇಂದ್ರ ಸಚಿವರಾಗಿದ್ದರು, ಡಿಕೆಶಿ ರಾಜ್ಯ ಸಚಿವರಾಗಿದ್ದವರು

ಚಿದಂಬರಂ ಕೇಂದ್ರ ಸಚಿವರಾಗಿದ್ದವರು, ಸೋನಿಯಾ ಗಾಂಧಿಯವರೊಂದಿಗೆ ಹೆಚ್ಚು ಒಡನಾಟವೂ ಇತ್ತು, ಹತ್ತಿರದಿಂದ ಬಲ್ಲವರು ಹಾಗಾಗಿ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಡಿಕೆ ಶಿವಕುಮಾರ್ ಕೇವಲ ರಾಜ್ಯ ಸಚಿವರಾಗಿದ್ದವರು ಎನ್ನುವ ಭಾವನೆಯೂ ಇದ್ದಿರಬಹುದು.

ಡಿಕೆ ಶಿವಕುಮಾರ್‌ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸಡಿಕೆ ಶಿವಕುಮಾರ್‌ಗೆ ಸೆಪ್ಟೆಂಬರ್ 25ರವರೆಗೂ ಜೈಲು ವಾಸ

ಒಂದು ಬಾರಿಗೆ ಒಬ್ಬರನ್ನೇ ಭೇಟಿ ಮಾಡಲು ಅವಕಾಶ

ಒಂದು ಬಾರಿಗೆ ಒಬ್ಬರನ್ನೇ ಭೇಟಿ ಮಾಡಲು ಅವಕಾಶ

ಒಂದೇ ಬಾರಿಗೆ ಒಬ್ಬರನ್ನು ಮಾತ್ರ ಭೇಟಿ ಮಾಡಲು ತಿಹಾರ್ ಜೈಲಿನಲ್ಲಿ ಅವಕಾಶ ವಿರುವುದರಿಂದ ಸೋನಿಯಾ ಗಾಂಧಿ ಕೇವಲ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿದ್ದಾರೆ. ಇನ್ನೊಂದು ಬಾರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಜೈಲಲ್ಲಿ ದಿಂಬಿಲ್ಲ, ಚೇರಿಲ್ಲ ಎಂದ ಚಿದು ಗೋಳು ಬಿಚ್ಚಿಟ್ಟ ಸಿಂಘ್ವಿಜೈಲಲ್ಲಿ ದಿಂಬಿಲ್ಲ, ಚೇರಿಲ್ಲ ಎಂದ ಚಿದು ಗೋಳು ಬಿಚ್ಚಿಟ್ಟ ಸಿಂಘ್ವಿ

ಚಿದಂಬರಂ ಪ್ರಕರಣವೇ ಬೇರೆ, ಡಿಕೆಶಿ ಪ್ರಕರಣವೇ ಬೇರೆ

ಚಿದಂಬರಂ ಪ್ರಕರಣವೇ ಬೇರೆ, ಡಿಕೆಶಿ ಪ್ರಕರಣವೇ ಬೇರೆ

2014ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ, ಪಿ ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ, ಮೀಡಿಯಾ ಕುಳಗಳಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಒಡೆತನದಲ್ಲಿದ್ದ ಐಎನ್ಎಕ್ಸ್ ಮೀಡಿಯಾ ಮಲೇಶಿಯಾದ ಕಂಪನಿಯಿಂದ 305 ಕೋಟಿ ರೂಪಾಯಿಗಳನ್ನು ಪಡೆದಿತ್ತು. ಆದರೆ, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯಿಂದ 4.62 ಕೋಟಿ ರೂಪಾಯಿ ಹೂಡಿಕೆ ಮಾಡಲು ಮಾತ್ರ ಅನುಮತಿ ನೀಡಲಾಗಿತ್ತು. ಡಿಕೆ ಶಿವಕುಮಾರ್ ಅವರ ಮೇಲೆ ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿ ಕಬಳಿಕೆ ಆರೋಪಗಳಿವೆ.

ಚಿದಂಬರಂ ತಿಹಾರ್ ಜೈಲು ವಾಸ ಇನ್ನೂ 14 ದಿನ ವಿಸ್ತರಣೆಚಿದಂಬರಂ ತಿಹಾರ್ ಜೈಲು ವಾಸ ಇನ್ನೂ 14 ದಿನ ವಿಸ್ತರಣೆ

ಕೇವಲ ಚಿದಂಬರಂ ಮಾತ್ರ ಭೇಟಿಯಾದ ಸೋನಿಯಾ

ಕೇವಲ ಚಿದಂಬರಂ ಮಾತ್ರ ಭೇಟಿಯಾದ ಸೋನಿಯಾ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಹಾರ್ ಜೈಲಿಗೆ ತೆರಳಿ ಕೇವಲ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರನ್ನು ಮಾತ್ರ ಭೇಟಿಯಾಗಿ ವಾಪಾಸಾಗಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿಲ್ಲ ಎನ್ನುವುದು ಆಶ್ಚಯ ತಂದಿದೆ.

English summary
AICC president Sonia Gandhi who said she was in support of Dk Shivakumar but She leaves Tihar Jail Without Meeting of DK Shivakumar .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X