ಬಿಜೆಪಿ ಸುದ್ದಿಗೋಷ್ಠಿ ವೇಳೆ ಬಿಜೆಪಿ ವಕ್ತಾರರ ಮೇಲೆ ಅಪರಿಚಿತನಿಂದ ಶೂ ಎಸೆತ
ನವದೆಹಲಿ, ಏ.18: ನವದೆಹಲಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಅಪರಿಚಿತನೊಬ್ಬ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಅವರ ಮೇಲೆ ಶೂ ಎಸೆದ ಘಟನೆ ಗುರುವಾರ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಂದು ಬೆಳಗ್ಗೆ ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ವಕ್ತಾರರಾಗಿರುವ ಜಿವಿಎಲ್ ನರಸಿಂಹ ರಾವ್ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಅಪರಿಚಿತನೊಬ್ಬ ನರಸಿಂಹ ರಾವ್ ಅವರ ಮೇಲೆ ಶೂ ಎಸೆದಿದ್ದಾನೆ. ಇದೀಗ ಶೂ ಎಸೆದ ಶಕ್ತಿ ಭಾರ್ಗವ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜ್ಞಾ ಸಿಂಗ್ ಬಿಜೆಪಿಗೆ ಸೇರ್ಪಡೆ : ದಿಗ್ವಿಜಯ್ ವಿರುದ್ಧ ಸ್ಪರ್ಧೆ ಸಾಧ್ಯತೆ
ವಿಚಾರಣೆ ವೇಳೆ ಪ್ರಜ್ಞಾ ಸಿಂಗ್ಗೆ ಬಿಜೆಪಿಯಿಂದ ಟಿಕೆಟ್ ನೀಡಿರುವುದೇ ಶಕ್ತಿ ಭಾರ್ಗವ್ ಅವರ ಆಕ್ರೋಶಕ್ಕೆ ಕಾರಣ ಎನ್ನುವ ಮಾಹಿತಿ ಮೊದಲಿಗೆ ಲಭ್ಯವಾಗಿದೆ.
#WATCH Delhi: Shoe hurled at BJP MP GVL Narasimha Rao during a press conference at BJP HQs .More details awaited pic.twitter.com/7WKBWbGL3r
— ANI (@ANI) April 18, 2019