ಠಾಕ್ರೆ 'ದಿಟ್ಟ ವ್ಯಕ್ತಿ' ಎಂದು ಹಾಡಿ ಹೊಗಳಿದ ನರೇಂದ್ರ ಮೋದಿ
ನವದೆಹಲಿ, ಜನವರಿ 23: ಶಿವಸೇನಾ ಸಂಸ್ಥಾಪಕ ಬಾಳ ಠಾಕ್ರೆ ಅವರ 93ನೇ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಠಾಕ್ರೆ ಅವರದು ದಿಟ್ಟ ವ್ಯಕ್ತಿತ್ವ ಎಂದು ಹೊಗಳಿದ್ದಾರೆ.
'ಧೈರ್ಯಶಾಲಿ ಬಾಳ ಸಾಹೇಬರನ್ನು ಅವರ ಜಯಂತಿಯಂದು ನೆನಪಿಸಿಕೊಳ್ಳುತ್ತೇನೆ. ಗೌರವಾನ್ವಿತ ಬಾಳ ಸಾಹೇಬರು ಜನರ ಹಕ್ಕುಗಳ ರಕ್ಷಣೆ ಮತ್ತು ಒಳಿತಿಗಾಗಿ ತಮ್ಮ ಬದ್ಧತೆಗೆ ಅಂಟಿಕೊಂಡಿದ್ದರು. ಅವರೊಬ್ಬ ದಿಟ್ಟ ವ್ಯಕ್ತಿ. ಅವರಿಗೆ ತೀಕ್ಷ್ಣ ಬುದ್ಧಿಶಕ್ತಿ ಮತ್ತು ವಿನೋದಪ್ರಜ್ಞೆಯ ಆಶೀರ್ವಾದವಿತ್ತು. ಅವರ ವಾಗ್ ಶಕ್ತಿ ಲಕ್ಷಾಂತರ ಜನರನ್ನು ಸೆಳೆದಿತ್ತು' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಶಿವಸೇನಾದ ಬಾಳ್ ಠಾಕ್ರೆ ಸ್ಮಾರಕಕ್ಕೆ 100 ಕೋಟಿ ರುಪಾಯಿ, ಮಹಾ ಸಂಪುಟ ಒಪ್ಪಿಗೆ
ಬಾಳ ಠಾಕ್ರೆ ಅವರ ಸ್ಮಾರಕ ನಿರ್ಮಾಣಕ್ಕೆ ಮಹಾರಾಷ್ಟ್ರ ಸರ್ಕಾರ ಮಂಗಳವಾರವಷ್ಟೇ 100 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿತ್ತು. ಮುಂಬೈ ಮೇಯರ್ ಬಂಗಲೆ ಇದ್ದ ಶಿವಾಜಿ ಪಾರ್ಕ್ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
Remembering the courageous Balasaheb Thackeray on his Jayanti. Respected Balasaheb was unwavering in his commitment towards protecting the rights and wellbeing of people. He was bold and was blessed with a sharp intellect and wit. His oratory skills mesmerised lakhs of people.
— Narendra Modi (@narendramodi) 23 January 2019
ಶಿವಸೇನಾ-ಬಿಜೆಪಿ ಕಚ್ಚಾಟ ಅಂತ್ಯ? ಮತ್ತೆ ಒಂದಾಗಲಿದ್ದಾರಾ ಹಳೆ ಮಿತ್ರರು?
ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ನಡುವಿನ ಗೆಳೆತನ ಹಳಸಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಉಭಯ ಪಕ್ಷಗಳು ಪರಸ್ಪರ ಶ್ಲಾಘನೆ ಆರಂಭಿಸಿವೆ.