ಶೀನಾ ಬೋರಾ ಹತ್ಯೆ ಪ್ರಕರಣ: ಸಿಬಿಐ, ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ
ನವದೆಹಲಿ,
ಫೆಬ್ರವರಿ
18:
ಶೀನಾ
ಬೋರಾ
ಹತ್ಯೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಸಿಬಿಐ
ಹಾಗೂ
ಮಹಾರಾಷ್ಟ್ರ
ಸರ್ಕಾರಕ್ಕೆ
ಸುಪ್ರೀಂಕೋರ್ಟ್
ನೋಟಿಸ್
ನೀಡಿದೆ.
2015ರ
ಆಗಸ್ಟ್ನಲ್ಲಿ
ಬಂಧನಕ್ಕೊಳಗಾಗಿ
ಮುಂಬೈನ
ಬೈಕುಲ್ಲಾ
ಮಹಿಳಾ
ಕಾರಾಗೃಹದಲ್ಲಿರುವ
ಮುಖರ್ಜಿ
ಅವರ
ಪರ
ಹಿರಿಯ
ವಕೀಲ
ಮುಕುಲ್
ರೋಹಟಗಿ
ವಾದ
ಮಂಡಿಸಿದರು.
ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯವು ಹಲವು ಸಂದರ್ಭಗಳಲ್ಲಿ ಜಾಮೀನು ನಿರಾಕರಿಸಿತ್ತು.
ಶೀನಾ ಬೋರಾ ಹತ್ಯೆ ಕೇಸ್: ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಹೇಳಿದ್ದೇನು?
ಮಗಳು ಶೀನಾ ಬೋರಾಳನ್ನು ಕೊಂದ ಆರೋಪದಲ್ಲಿ ಮುಖರ್ಜಿ ವಿಚಾರಣೆ ಎದುರಿಸುತ್ತಿದ್ದಾರೆ. ಬೋರಾ (24) ಅವರನ್ನು 2012 ರ ಏಪ್ರಿಲ್ನಲ್ಲಿ ಮುಖರ್ಜಿ, ಆಕೆಯ ಆಗಿನ ಚಾಲಕ ಶ್ಯಾಮ್ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಅವರು ಕಾರಿನಲ್ಲಿ ಕತ್ತು ಹಿಸುಕಿ ಕೊಂದಿದ್ದರು. ಪಕ್ಕದ ರಾಯಗಡ ಜಿಲ್ಲೆಯ ಕಾಡಿನಲ್ಲಿ ಶವವನ್ನು ಸುಟ್ಟು ಹಾಕಲಾಗಿದೆ. ಮಾಜಿ ಮಾಧ್ಯಮ ಬ್ಯಾರನ್ ಪೀಟರ್ ಮುಖರ್ಜಿಯವರನ್ನೂ ಪಿತೂರಿಯ ಭಾಗವೆಂಬ ಆರೋಪ ಹಿನ್ನೆಲೆ ಬಂಧಿಸಲಾಯಿತು.
ಫೆಬ್ರವರಿ 2020ರಲ್ಲಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿತು. ಇಂದ್ರಾಣಿ ಮುಖರ್ಜಿಯವರೊಂದಿಗಿನ ಅವರ ವಿವಾಹವು ಸೆರೆವಾಸದ ಅವಧಿಯಲ್ಲಿ ಕೊನೆಗೊಂಡಿತು.
ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಪಿಎಸ್ ನರಸಿಂಹ ಅವರ ಪೀಠವು ಬಾಂಬೆ ಹೈಕೋರ್ಟ್ ನವೆಂಬರ್ 16, 2021ರಂದು ನೀಡಿದ್ದ ಮುಖರ್ಜಿ ಅವರ ಜಾಮೀನು ಆದೇಶವನ್ನು ಪ್ರಶ್ನಿಸಿ ಸಿಬಿಐ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. "ನೋಟೀಸ್ ನೀಡಲಾಗಿದೆ. ಎರಡು ವಾರಗಳಲ್ಲಿ ಹಿಂತಿರುಗಿಸಬಹುದು" ಎಂದು ಪೀಠ ಹೇಳಿದೆ.
ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಈಗ ಯಾರೂ ಊಹಿಸಲಾಗದ ತಿರುವು ಸಿಕ್ಕಿತ್ತು. ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ 6 ವರ್ಷದಿಂದ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ, ಈಗ ಶೀನಾ ಬೋರಾ ಇನ್ನು ಜೀವಂತವಾಗಿದ್ದಾಳೆ, ಕಾಶ್ಮೀರದಲ್ಲಿ ವಾಸವಾಗಿದ್ದಾಳೆ ಎಂದು ಸಿಬಿಐಗೆ ಪತ್ರ ಬರೆದಿದ್ದರು. ಈ ಮೂಲಕ ಪ್ರಕರಣಕ್ಕೆ ಮತ್ತೆ ಜೀವ ಬಂದಂತಾಗಿತ್ತು.
ಮುಂಬೈನ ಬೈಕುಲ್ಲಾ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ, ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ನನ್ನ ಜೊತೆ ಇರುವ ಮಹಿಳಾ ಕೈದಿ ಭೇಟಿಯಾಗಿದ್ದಾಳೆ. ಶೀನಾ ಬೋರಾ ಜೀವಂತವಾಗಿದ್ದು, ಕಾಶ್ಮೀರದಲ್ಲಿ ವಾಸವಾಗಿದ್ದಾಳೆ. ತನಿಖೆ ನಡೆಸಿ ಎಂದು ನೇರವಾಗಿ ಸಿಬಿಐ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾಳೆ. ಆ ಮಹಿಳಾ ಕೈದಿ ಮಹಿಳಾ ಸರ್ಕಾರಿ ಅಧಿಕಾರಿ ಎಂದು ಹೇಳಲಾಗಿತ್ತು.
ಆದರೆ, ಈ ಬಗ್ಗೆ ಇಂದ್ರಾಣಿ ಮುಖರ್ಜಿ ಅವರ ವಕೀಲೆ ಸನಾ ಖಾನ್ ಇಂದ್ರಾಣಿ ಅವರು ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದು ನಮಗೂ ಗೊತ್ತಿಲ್ಲ. ಆದರೆ, ಪತ್ರ ಬರೆದಿರುವುದಂತೂ ನಿಜ ಎಂದು ಹೇಳಿದ್ದಾರೆ. ಅದಲ್ಲದೇ ಔಪಚಾರಿಕವಾಗಿ ಜಾಮೀನು ಅರ್ಜಿ ಸಲ್ಲಿಸಲು ವಕೀಲರ ತಂಡ ಮುಂದಾಗಿದೆ. ಡಿಸೆಂಬರ್ 28ರಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದರು.