ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಲ ಸಮಸ್ಯೆ: ಕೇಂದ್ರದ ಮೊರೆ ಹೋದ ಶಾಶ್ವತ ನೀರಾವರಿ ಹೋರಾಟ ಸಮಿತಿ
ನವದೆಹಲಿ, ಜುಲೈ 4: ಜನರ ಬಾಯಾರಿಕೆ ನೀಗಿಸಿ ಎಂದು ಶಾಶ್ವತ ನೀರಾವತಿ ಹೋರಾಟ ಸಮಿತಿಯು ಕೇಂದ್ರದ ಮೊರೆ ಹೋಗಿದೆ.
ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ, ಬಿಜೆಪಿ ವಕ್ತಾರ ಎ.ಎಚ್ ಆನಂದ್ ನೇತೃತ್ವದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.
ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ, ಕೃಷಿಗೆ ಸಂಬಂಧಿಸಿದಂತೆ ಶಾಶ್ವತವಾಗಿ ನೀರು ಲಭ್ಯವಾಗುವಂತಹ ಯೋಜನೆ ರೂಪಿಸಬೇಕು. ಹಾಗೆಯೇ ಈ ಬಾರಿಯ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ತಲೆ ಎತ್ತಿರುವ ನೀರಿನ ಸಮಸ್ಯೆ ಬಗೆಹರಿಸಲು 120 ಟಿಎಂಸಿಯಷ್ಟು ನೀರನ್ನು ಒದಗಿಸಬೇಕು ಈ ಕುರಿತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜಲತಜ್ಞರ ಜೊತೆ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
Comments
English summary
The Shashwata Neeravari Horata Samithi led by Anjaneya Reddy and BJP Spokes person, Mr. A.H. Anand met Union minister Gajendra Singh Shekhawat to appeals that Resolve people's thirst in Karnataka.
Story first published: Thursday, July 4, 2019, 12:52 [IST]