ಸುಪ್ರೀಂ ತೀರ್ಪು ದೆಹಲಿ ಸರ್ಕಾರದ ಗೆಲುವು ಹೇಗಾಗುತ್ತದೆ? ಬಿಜೆಪಿ ಪ್ರಶ್ನೆ
ನವದೆಹಲಿ, ಜುಲೈ 04: ಕೇಂದ್ರಾಡಳಿತ ಪ್ರದೇಶವಾಗಿರುವ ರಾಜಧಾನಿ ದೆಹಲಿಗೆ ಪೂರ್ಣರಾಜ್ಯದ ಸ್ಥಾನಮಾನ ನೀಡುವದಕ್ಕೆ ಒಲ್ಲೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ಸಹ ಅದು ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ, ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಎಎಪಿ ತನ್ನ ಸರ್ಕಾರದ ಗೆಲುವು ಎನ್ನುತ್ತಿದೆ. 'ದೆಹಲಿಗೆ ಪೂರ್ಣರಾಜ್ಯದ ಸ್ಥಾನಮಾನ ನೀಡುವ' ಬೇಡಿಕೆ ದೆಹಲಿ ಸರ್ಕಾರದ ಮಹತ್ವದ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಸುಪ್ರೀಂ ಕೋರ್ಟ್ ಒಲ್ಲೆ ಎಂದಿರುವಾಗ ಇದು ದೆಹಲಿ ಸರ್ಕಾರದ ಸೋಲಲ್ಲವೇ ಎಂದು ಬಿಜೆಪಿ ವಕ್ತಾರ ನಳಿನ್ ಕೋಹ್ಲಿ ತಿಳಿಸಿದ್ದಾರೆ.
ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನವಿಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ತೀರ್ಪನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರು ಸ್ವಾಗತಿಸಿ, ಇದು ಪ್ರಜಾಪ್ರಭುತ್ವದ ಗೆಲುವುದು ಎಂದಿದ್ದರು.
ದೆಹಲಿಯನ್ನು ಪೂರ್ಣರಾಜ್ಯ ಎಂದು ಘೋಷಿಸುವದಕ್ಕೆ ಸುಪ್ರೀಂ ಕೋರ್ಟ್ ಒಪ್ಪದಿದ್ದರೂ, ಲೆಫ್ಟಿನೆಂತ್ ಗವರ್ನರ್ ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅನುಮತಿಯಿಲ್ಲ. ದೆಹಲಿ ಸರ್ಕಾರದ ಜೊತೆ ಎಲ್ ಜಿ ಸೌಹಾರ್ದ ಸಂಬಂಧ ಹೊಂದಿ, ಒಟ್ಟಾಗಿ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.