ಮಾನನಷ್ಟ ಮೊಕದ್ದಮೆ : ಸ್ಮೃತಿ ಇರಾನಿಗೆ ಸುಪ್ರೀಂಕೋರ್ಟಿನಿಂದ ನೋಟಿಸ್
ನವದೆಹಲಿ, ಏಪ್ರಿಲ್ 22: ಕಿರುತೆರೆಯ ಮಾಜಿ ಸ್ಟಾರ್, ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಕಾರ್ಯದರ್ಶಿ ಸಂಜಯ್ ನಿರುಪಮ್ ನಡುವಿನ ಮಾನನಷ್ಟ ಮೊಕದ್ದಮೆ ಪ್ರಕರಣ ಮತ್ತೊಮ್ಮೆ ಸುದ್ದಿಯಲ್ಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸ್ಮೃತಿ ಅವರ ಹಿನ್ನೆಲೆ ಬಗ್ಗೆ ಹೇಳ ಹೊರಟ ಸಂಜಯ್ ಅವರು "Till some time ago you were dancing on TV screens and now you have become a psephologist." ಎಂದು ಹೇಳಿ ನಗಾಡಿದ್ದರು.
ಸ್ಮೃತಿ ಇರಾನಿ ಬಗ್ಗೆ 'ಸೆಕ್ಸಿ' ಹೇಳಿಕೆಗೆ ಖಂಡನೆ
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವುದನ್ನು ಸಹಿಸದೆ ಈ ರೀತಿ ಹೇಳಿಕೆ ನೀಡುವ ಸದಸ್ಯರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಅಗ್ರಹಿಸಿತ್ತು. ಕಾಂಗ್ರೆಸ್ ನಲ್ಲೂ ನಿರುಪಮ್ ಅವರ ಹೇಳಿಕೆ ವಿರುದ್ಧ ಕೂಗು ಎದ್ದಿದೆ. ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧುರಿ ಮಾತನಾಡಿ, ಸಂಜಯ್ ಅವರು ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಈ ರೀತಿ ಮನಸ್ಥಿತಿ ಅನೇಕ ಪುರುಷರಲ್ಲಿ ಇದೆ ಇದರ ವಿರುದ್ಧ ಹೋರಾಟ ಅಗತ್ಯ ಎಂದಿದ್ದರು.
ಮಾಜಿ ಸಂಸದ ಸಂಜಯ್ ನಿರುಪಮ್ ವಿರುದ್ಧ ಸ್ಮೃತಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯವು ಸಂಜಯ್ ನಿರುಪಮ್ ಗೆ ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸ್ ವಜಾಗೊಳಿಸುವಂತೆ ಕೋರಿ ಸಂಜಯ್ ಅವರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು(ಏಪ್ರಿಲ್ 22) ಸ್ಮೃತಿ ಇರಾನಿಗೆ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ಅವರಿರುವ ನ್ಯಾಯಪೀಠವು, ಈ ಪ್ರಕರಣದ ಬಗ್ಗೆ ಸ್ಮೃತಿ ಅವರಿಂದ ಸ್ಪಷ್ಟನೆ ಕೇಳಿದೆ.ಸಂಜಯ್ ನಿರುಪಮ್ ಅವರು ಸ್ಮೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದು, ಈ ಪ್ರಕರಣದಲ್ಲಿ ಸ್ಮೃತಿ ವಿರುದ್ಧ ಜಾರಿಗೊಂಡಿದ್ದ ಸಮನ್ಸ್ ಅನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.