ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದ ಗಣಿಗಾರಿಕೆ ಮಿತಿಯನ್ನು ಸಡಿಲಗೊಳಿಸಿದ ಸುಪ್ರೀಂ
ನವದೆಹಲಿ, ಡಿಸೆಂಬರ್ 14 : ರಾಜ್ಯದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಅದಿರು ಗಣಿಗಾರಿಕೆ ಮಿತಿಯನ್ನು ಸಡಿಲಗೊಳಿಸಿ ಗುರುವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಾಜ್ಯದಲ್ಲಿ ಗರಿಷ್ಠ 30 ಎಂಎಂಟಿ ಗಣಿಗಾರಿಕೆಗೆ ಈ ಹಿಂದೆ ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು. ಪ್ರಸಕ್ತ ರಾಜ್ಯದಲ್ಲಿ ಗಣಿಗಾರಿಕೆಯ ಸ್ಥಿತಿ ಬದಲಾಗಿದೆ. ಮನಸೋ ಇಚ್ಚೆ ಗಣಿಗಾರಿಕೆ ನಡೆಯುತ್ತಿದ್ದ ಪರಿಸ್ಥಿತಿ ಈಗ ಇಲ್ಲ. ಗಣಿಗಾರಿಕೆಗೆ ನಿಯಂತ್ರಣ ವ್ಯವಸ್ಥೆ ಬಂದಿದೆ.
ಹಾಗೆಯೇ ಸಿ ಕೆಟಗರಿಯಲ್ಲಿದ್ದ ಕೆಲ ಗಣಿ ಗುತ್ತಿಗೆಗಳು ಇದೀಗ ಹರಾಜು ಆಗಿದ್ದು ಅವುಗಳಲ್ಲಿಯೂ ಒಂದೆರಡು ವರ್ಷಗಳಲ್ಲಿ ಗಣಿಗಾರಿಕೆ ಆರಂಭಗೊಳ್ಳಲಿದೆ. ಸಿಇಸಿ, ರಾಜ್ಯ ಸರ್ಕಾರದಿಂದಲೂ ಅದಿರು ಮಿತಿ ಹೆಚ್ಚಳಕ್ಕೆ ಬೆಂಬಲ ಈ ಹಿನ್ನೆಲೆಯಲ್ಲಿ ನ್ಯಾ. ರಂಜನ್ ಗೊಗಾಯ್, ನ್ಯಾ. ಎ ಎಂ ಸಪ್ರೆ ಮತ್ತು ನ್ಯಾ. ನವೀ ಸಿನ್ಹಾ ಅವರಿದ್ದ ಪೀಠದಿಂದ ಅನುಮತಿ ನೀಡಿದೆ.
Comments
English summary
SC gives relief for mining in Karnataka: Supreme Court has given relief on ban in iron ore mining in Bellary, Chitradurga and Tumkur districts in Kranataka on Thursday.
Story first published: Thursday, December 14, 2017, 19:03 [IST]