ಪಕ್ಷ ಬಿಟ್ಟು ಬಂದದ್ದೇ ಬಂದದ್ದು ಶತ್ರುಘ್ನರಿಂದ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ
ನವದೆಹಲಿ,ಏ.6: ಪಕ್ಷ ಬಿಟ್ಟು ಕಾಂಗ್ರೆಸ್ಗೆ ಸೇರಿರುವ ನಟ, ರಾಜಕಾರಣಿ ಶತ್ರುಘ್ನ ಸಿಂಹ ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿ ಏಕವ್ಯಕ್ತಿಯ ಪ್ರದರ್ಶನ, ಇಬ್ಬರು ಮನುಷ್ಯ ಸೇನೆ. ಇಲ್ಲಿ ಎಲ್ಲವೂ ಪ್ರಧಾನಮಂತ್ರಿ ಕಚೇರಿಯಿಂದ ನಿರ್ವಹಿಸಲ್ಪಡುತ್ತವೆ ಎಂದು ಹೇಸಚಿವರು ನಿರಾಳವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನವೇ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಶತ್ರುಘ್ನ ಸಿನ್ಹಾ
ಪ್ರಜಾಪ್ರಭುತ್ವ ಸರ್ವಾಧಿಕಾರತ್ವಕ್ಕೆ ಬದಲಾಗಿರುವುದನ್ನು ನಾವು ನೋಡಿದ್ದೇವೆ ಎಂದರು.ಎಲ್.ಕೆ.ಆಡ್ವಾನಿ ಅವರನ್ನು ಪಕ್ಷ ನಡೆಸಿಕೊಂಡಿರುವುದರ ಬಗ್ಗೆ ಮಾತನಾಡಿದ ಶತ್ರುಘ್ನ ಸಿನ್ಹಾ, ಆಡ್ವಾನಿ ಅವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಯಿತು.
ಅಲ್ಲಿ ಒಂದೇ ಒಂದು ಸಭೆಯನ್ನೂ ಕೂಡ ಮಾಡಲಿಲ್ಲ. ಅದೇ ರೀತಿ ಜಸ್ವಂತ್ ಸಿಂಗ್, ಯಶ್ವಂತ್ ಸಿನ್ಹಾ ಅವರನ್ನು ಕಡೆಗಣಿಸಲಾಯಿತು. ತಪ್ಪನ್ನು ನಾನು ವಿಮರ್ಶಿಸುತ್ತೇನೆ. ಏಕೆಂದರೆ ನನ್ನ ವ್ಯಕ್ತಿತ್ವ ಸ್ವಚ್ಛವಾಗಿದೆ ಎಂದರು.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಬಿಜೆಪಿಯಲ್ಲಿ ಇದ್ದಾಗಲೂ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಟೀಕೆ ಮಾಡಿಕೊಂಡೇ ಬಂದ ಶತ್ರುಘ್ನ ಸಿನ್ಹಾ ಇಂದು ಸಹ ಬಿಜೆಪಿ ವಿರುದ್ಧ ಟೀಕೆ ಮುಂದುವರೆಸಿದ್ದಾರೆ.