ಕೇಂದ್ರ ಸರ್ಕಾರದಿಂದ ಹೊಸ ಇಮ್ಯುನಿಟಿ ಬೂಸ್ಟರ್ ಉತ್ಪನ್ನಗಳ ಬಿಡುಗಡೆ
ನವದೆಹಲಿ, ಸೆಪ್ಟೆಂಬರ್ 3: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಜನರಲ್ಲಿನ ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಹೊಸ ಇಮ್ಯುನಿಟಿ ಬೂಸ್ಟರ್ ಉತ್ಪನ್ನಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪ್ರಿಯೋಜನಾ (ಪಿಎಂಬಿಜೆಪಿ) ಅಡಿಯಲ್ಲಿ ಎಂಟು ಪೋಷಕಾಂಶಯುತ- ಪ್ರತಿರಕ್ಷಣಾ ವೃದ್ಧಿ ಉತ್ಪನ್ನಗಳನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಗುರುವಾರ ಬಿಡುಗಡೆ ಮಾಡಿದರು.
ಬಸ್ನಲ್ಲಿ ಒಬ್ಬ ಪ್ರಯಾಣಿಕರಿಗೆ ಎರಡು ಸೀಟ್; ಡಬಲ್ ಚಾರ್ಜ್!
ಈ ಸಾಮರ್ಥ್ಯ ವೃದ್ಧಿಯ ಉತ್ಪನ್ನಗಳನ್ನು ದೇಶದಾದ್ಯಂತ ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಪೌಷ್ಟಿಕಾಂಶಯುಕ್ತ ಉತ್ಪನ್ನಗಳು ಕೊರೊನಾ ವೈರಸ್ ಸೋಂಕಿನ ದೃಷ್ಟಿಯಿಂದ ಮಹತ್ವದ್ದಾಗಿವೆ. ಈ ಉತ್ಪನ್ನಗಳು ಜನರಲ್ಲಿ ವೈರಸ್ ಎದುರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸದಾನಂದ ಗೌಡ ತಿಳಿಸಿದರು.
ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿನ ಇತರೆ ಉತ್ಪನ್ನಗಳಿಗಿಂತ ಅಧಿಕ ಗುಣಮಟ್ಟ ಮತ್ತು ಮಾರುಕಟ್ಟೆ ದರಕ್ಕಿಂತ ಶೇ 26ರಷ್ಟು ಅಗ್ಗವಾಗಿದೆ. ಜನೌಷಧಿ ಕೇಂದ್ರಗಳ ವ್ಯಾಪಕ ಜಾಲದ ಮೂಲಕ ಈ ಇಮ್ಯುನಿಟಿ ವೃದ್ಧಿಸುವ ಪ್ರೊಟೀನ್ ಉತ್ಪನ್ನಗಳು ಹೆಚ್ಚಿನ ಜನರಿಗೆ ತಲುಪಲಿದ್ದು, ಜನರ ಆರೋಗ್ಯ ಉತ್ತಮಗೊಳ್ಳಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಕೊವಿಡ್-19 ಎರಡನೇ ಅಲೆ ಬಗ್ಗೆ ಸಚಿವರ ಸ್ಪಷ್ಟನೆ
ದೇಶದ ಜನರ ಒಟ್ಟಾರೆ ಆರೋಗ್ಯ ಮತ್ತು ಪೌಷಿಕತೆಯ ಸ್ಥಿತಿಯನ್ನು ಸುಧಾರಿಸಲು ಪ್ರೊಟೀನ್ ಸಪ್ಲಿಮೆಂಟ್ಗಳು, ಧಾನ್ಯ ಆಧಾರಿತ ಪೌಷ್ಟಿಕ ಪೇಯಗಳು, ಇಮ್ಯನಿಟಿ ಬೂಸ್ಟರ್ಗಳು ಮುಂತಾದ ಪೌಷ್ಟಿಕಾಂಶ ಉತ್ಪನ್ನಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು.