ತ್ವರಿತ ಅಲರ್ಟ್ ಗಳಿಗಾಗಿ
For Daily Alerts
'ರಂಜನ್ ಗೊಗಯ್ ನಂತಹ ಲಜ್ಜಗೇಡಿ ಮನುಷ್ಯ ಮತ್ತೊಬ್ಬ ಇಲ್ಲ'; ಕಾಟ್ಜು
ನವದೆಹಲಿ, ಮಾರ್ಚ್ 17; ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಅವರನ್ನು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿರುವುದು ವಿವಾದದ ಕಿಡಿ ಹೊತ್ತಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ರಂಜನ್ ಗೊಗಯ್ ಅಂತಹ ಲಜ್ಜಿಗೇಡಿ ಮನುಷ್ಯನನ್ನು ನಾನು ನನ್ನ ಜೀವಮಾನದಲ್ಲಿಯೇ ನೋಡಿರಲಿಲ್ಲ ಎಂದು ವಿರೋಧಿಸಿದ್ದಾರೆ.
ರಾಜ್ಯಸಭೆಗೆ ಸಿಜೆಐ ರಂಜನ್ ಗೋಗೊಯ್ ನಾಮನಿರ್ದೇಶನ
ನಾನು ಸಹ 20 ವರ್ಷ ವಕೀಲನಾಗಿ 20 ವರ್ಷ ನ್ಯಾಯಾಧೀಶ, ನ್ಯಾಯಮೂರ್ತಿ ಆಗಿ ಕೆಲಸ ಮಾಡಿದ್ದೇನೆ. ಆದರೆ, ಗೊಗಯ್ ಅಂತಹ ಕೆಟ್ಟ ಮನುಷ್ಯನನ್ನು ನೋಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ಸುಪ್ರೀಂಕೋರ್ಟ ನ 46 ನೇ ಮುಖ್ಯ ನ್ಯಾಯಮೂರ್ತಿ ಆಗಿ ರಂಜನ್ ಗೊಗಯ್ ಅವರು 2018-19 ರ ಅವಧಿಯಲ್ಲಿ 13 ತಿಂಗಳು ಕೆಲಸ ಮಾಡಿದ್ದಾರೆ. ಅವರು ಈಗ ರಾಜ್ಯಸಭೆಗೆ ಹೋಗುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
Comments
ranjan gogoi new delhi rajya sabha election central government ನವದೆಹಲಿ ರಾಜ್ಯಸಭೆ ಚುನಾವಣೆ ಕೇಂದ್ರ ಸರ್ಕಾರ
English summary
Retired Justice Markandey Katju Attack On Retired Justice Ranjan Gogoi about rajya sabha nomination.
Story first published: Tuesday, March 17, 2020, 23:46 [IST]