ಮೇಲ್ವರ್ಗದವರಿಗೂ ಮೀಸಲಾತಿ! ಮೋದಿ ಸರ್ಕಾರದ ನಡೆಗೆ ಟ್ವಿಟ್ಟಿಗರು ಏನಂದ್ರು?
ನವದೆಹಲಿ, ಜನವರಿ 07: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೂ ಸರ್ಕಾರಿ ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಣಯವನ್ನು ಸೋಮವಾರ ಕೇಂದ್ರ ಸಚಿವ ಸಂಪುಟ ತೆಗೆದುಕೊಂಡಿದೆ.
ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತಲೂ ಕಡಿಮೆ ಇರುವ ಪ್ರತಿಭಾನ್ವಿತ ಮೇಲ್ವರ್ಗದ ಯುವಕರು, ಕೇವಲ ಜಾತಿಯ ಕಾರಣಕ್ಕಾಗಿ ಉದ್ಯೋಗ ಪಡೆಯದೇ ಇರುವಂಥ ಸನ್ನಿವೇಶವನ್ನು ತಪ್ಪಿಸುವ ಸಲುವಾಗಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಮೀಸಲಾತಿ
ಮೋದಿ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಹಲವರು ಸ್ವಾಗತಿಸಿ, 'ಉಘೆ' ಎಂದಿದ್ದರೆ, ಕೆಲವರು ಈ ನಿರ್ಣಯವನ್ನು ಖಂಡಿಸಿದ್ದಾರೆ. ಸರ್ಕಾರದ ಈ ಕ್ರಮದಿಂದ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗಿದೆ ಎಂದು ಮತ್ತಷ್ಟು ಜನ ದೂರಿದ್ದಾರೆ.
Array |
ಜಾತಿ ಆಧಾರಿತ ಮೀಸಲಾತಿಗಿಂತ ಇದೇ ಮೇಲು!
ಜಾತಿ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕಿಂತ ಆರ್ಥಿವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವುದು ಸರಿಯಾದ ಕ್ರಮ. ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಹೀಗೇ ಎಲ್ಲಾ ಜಾತಿ ಆಧಾರಿತ ಮೀಸಲಾತಿಗಳೂ ದೂರವಾಗಲಿ ಎಂದು ಶಿಲ್ಪಿ ರಾಯ್ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ!
Array |
ಮೀಸಲಾತಿಯ ವಿಡಂಬನೆ
ಇದು ಮೀಸಲಾತಿಯ ವಿಡಂಬನೆ. ಮೀಸಲಾತಿ ಎಂಬುದು ಎಂದಿಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಲ್ಲಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಕ್ರಮ ಅಂಬೇಡ್ಕರ್ ಅವರಿಗೆ ನೀಡುವ ಗೌರವವಲ್ಲ ಎಂದಿದ್ದಾರೆ ಹೇಮಾರ್ಘ್ಯ.
ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವಾದ ಮೀಸಲು ವಿವಾದ
|
ಹಳೆಯ ಮೀಸಲಾತಿಗಳಿಗೆ ಧಕ್ಕೆಯಿಲ್ಲ!
ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ನೀಡಿದ ಮೋದಿ ಸರ್ಕಾರ ಈಗಾಗಲೇ ಅಸ್ತಿತ್ವದಲ್ಲಿದ್ದ ಯಾವುದೇ ಮೀಸಲಾತಿಗೂ ಧಕ್ಕೆ ತಂದಿಲ್ಲ ಎಂದು ಈ ಕ್ರಮವನ್ನು ಸ್ವಾಗತಿಸಿದ್ದಾರೆ ಬಿಪಿನ್ ಕುಮಾರ್ ತಿವಾರಿ.
|
ಇದನ್ನೇ ನಿರೀಕ್ಷಿಸಿದ್ದೆವು
ಮೋದಿ ಸರ್ಕಾರದಿಂದ ನಾವು ಹಲವು ದಿನಗಳಿಂದ ಈ ನಿರ್ಧಾರವನ್ನೇ ನಿರೀಕ್ಷಿಸಿದ್ದೆವು. ನಿಮೆ ನಮ್ಮ ಸಲಾಂ ಎಂದಿದ್ದಾರೆ ರವಿ ಕೆ ಎಸ್.
|
ಐತಿಹಾಸಿಕ ನಡೆ
ಮೋದಿ ಸರ್ಕಾರದಿಂದ ಐತಿಹಾಸಿಕ ನಡೆ. ಇದೊಂದು ಅನಿರೀಕ್ಷಿತ ನಡೆ ಸಹ. ಮೋದಿ ಸರ್ಕಾರದ ಈ ನಡೆಯಿಂದ 2019 ರ ಲೋಕಸಭಾ ಚುನಾವಣೆಯ ದಿಕ್ಕೇ ಬದಲಾಗಬಹುದು ಎಂದು ಮೋಡಿಫೈಡ್ ಇಂಡಿಯನ್ ಟ್ವೀಟ್ ಮಾಡಿದೆ.