ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್

|
Google Oneindia Kannada News

ನವದೆಹಲಿ, ಆಗಸ್ಟ್ 19: ಉತ್ತರ ಭಾರತದಲ್ಲಿ ಭಾರಿ ಮಳೆ ಮುಂದುವರೆದಿದ್ದು, ಹಿಮಾಚಲ ಪ್ರದೇಶದಲ್ಲಿ ಈಗಾಗಲೇ 24 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ದೆಹಲಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೆಲವೇ ದಿನಗಳ ಹಿಂದೆ ಮಹಾರಾಷ್ಟ್ರ, ಬಿಹಾರ, ಮುಂಬೈ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ಪ್ರವಾಹದ ಸ್ಥಿತಿ ತಂದೊಡ್ಡಿತ್ತು. ಉತ್ತರ ಭಾರತದ ಹಲವಡೆ ಮಳೆಯಾಗಿದ್ದು ಇದುವರೆಗೆ 30 ಮಂದಿ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶವೊಂದರಲ್ಲೇ 24 ಕ್ಕೂ ಹೆಚ್ಚು ಮೃತಪಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಉತ್ತರ ಪ್ರದೇಶ, ಹರಿಯಾಣ, ಹರಿಯಾಣ, ದೆಹಲಿ, ಪಂಜಾಬ್ ಸೇರಿದಂತೆ ಇತರೆ ಕಡೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನ 250 ಹಳ್ಳಿಗಳು ರೋಪರ್, ಜಲಂಧರ್, ಕಾಪುರ್ತಾಲ, ಲುಧಿಯಾನ, ಮೋಗಾ ಹಾಗೂ ಫಿರೋಜ್‌ಪುರದಲ್ಲಿ ಹೆಚ್ಚು ಮಳೆ ಬರುವ ಮುನ್ಸೂಚನೆ ನೀಡಿದೆ.

Red Alert Issued For Delhi

ಹಿಮಾಚಲ ಪ್ರದೇಶದಲ್ಲಿ ಭಾನುವಾರ ಅತಿ ಹೆಚ್ಚು ಮಳೆ ದಾಖಲಾಗಿದೆ. 102.5 ಮಿ.ಮೀನಷ್ಟು ಮಳೆ ದಾಖಲಾಗಿದೆ. ಸಾಮಾನ್ಯ ಮಳೆಗಿಂತ ಶೇ.1,065 ಪಟ್ಟು ಮಳೆ ಅಧಿಕವಾಗಿದೆ.

ಲಾಹೌಲ್ ನಲ್ಲಿ 150ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಮಳೆ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಬಾಲ್ ಸಭೆ ಕರೆದಿದ್ದಾರೆ. ಉತ್ತರ ಪ್ರದೇಶದ ಗಂಗಾ, ಯಮುನಾ, ಗಾಗ್ರಾ ನದಿ ತುಂಬಿದ್ದು ಅಪಾಯದ ಮಟ್ಟವನ್ನು ಮೀರಿದೆ.

English summary
Heavy rain In North India, 24 Dead In Himachal, Delhi On Alert, at least 30 people were killed in floods and landslides on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X