ರಾಜ್ಯಸಭೆ ಉಪಸಭಾಪತಿ ಚುನಾವಣೆ: NDA ಅಭ್ಯರ್ಥಿಗೆ ನಿರೀಕ್ಷಿತ ಗೆಲುವು
ನವದೆಹಲಿ, ಆಗಸ್ಟ್ 09: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.
ರಾಜ್ಯಸಭೆ ಉಪ ಸಭಾಪತಿಯ ಆಯ್ಕೆಯ ಸಲುವಾಗಿ ಇಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚುನಾವಣೆ ನಡೆದಿದೆ. ಪಿ.ಜೆ.ಕುರಿಯನ್ ಅವರ ಅಧಿಕಾರಾವಧಿ ಜು.1 ರಂದು ಮುಕ್ತಾಯವಾಗಿರುವ ಕಾರಣ ಚುನಾವಣೆ ನಡೆದಿತ್ತು.
ಯುಪಿಎ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನಿಂದ ಬಿ ಕೆ ಹರಿಪ್ರಸಾದ್ ಕಣದಲ್ಲಿದ್ದರು.
ಉಪ ಸಭಾಪತಿ ಚುನಾವಣೆ: ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲ ಎಷ್ಟಿದೆ?
ಮುಂಗಾರು ಅಧಿವೇಶನ ನಾಳೆ(ಆಗಸ್ಟ್ 10) ಅಂತ್ಯವಾಗಲಿದ್ದು, ಅದಕ್ಕೂ ಮುನ್ನ ರಾಜ್ಯಸಭಾ ಉಪಸಭಾಪತಿ ಆಯ್ಕೆ ನಡೆದಿದೆ.
ಹರಿವಂಶ ಸಿಂಗ್ ಅವರ ಪರವಾಗಿ 125 ಮತಗಳು ಬಂದಿದ್ದರೆ ಯುಪಿಎ ಅಭ್ಯರ್ಥಿ ಬಿಕೆ ಹರಿಪ್ರಸಾದ್ ಪರ 105 ಮತಗಳು ಬಂದಿವೆ.
We are confident of our win and election result is a foregone conclusion: Harivansh Narayan Singh, NDA's candidate for the post of Rajya Sabha Deputy Chairman. pic.twitter.com/sRnJn07UG4
— ANI (@ANI) August 9, 2018
BJP has issued a three line whip to its Rajya Sabha MPs to be present in the house today. Voting for Deputy Chairman is to take place today pic.twitter.com/jYJus61aov
— ANI (@ANI) August 9, 2018