ರಾಜ್ಯಸಭೆ ನೂತನ ಉಪಸಭಾಪತಿಯಾಗಿ ಹರಿವಂಶ ಸಿಂಗ್ ಆಯ್ಕೆ
Recommended Video
ನವದೆಹಲಿ, ಆಗಸ್ಟ್ 09: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಜೆಡಿಯು ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಗೆಲುವು ಸಾಧಿಸಿದ್ದಾರೆ.
ಉಪಸಭಾಪತಿಯಾಗಿದ್ದ ಪಿ ಜೆ ಕುರಿಯನ್ ಅವರ ಅಧಿಕಾರಾವಧಿ ಜುಲೈ 1 ರಂದು ಪೂರ್ಣಗೊಂಡಿದ್ದು, ಆ ಸ್ಥಾನಕ್ಕಾಗಿ ಇಂದು ಮುಂಗಾರು ಅಧಿವೇಶನದಲ್ಲಿ ಚುನಾವಣೆ ನಡೆದಿತ್ತು.
LIVE: ರಾಜ್ಯಸಭಾ ಉಪಸಭಾಪತಿಯಾಗಿ NDA ಅಭ್ಯರ್ಥಿ ಹರಿವಂಶ ಸಿಂಗ್ ಆಯ್ಕೆ
ಎನ್ ಡಿಎ ಯಿಂದ ಹರಿವಂಶ ಸಿಂಗ್, ಯುಪಿಎ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಕೆ ಹರಿಪ್ರಸಾದ್ ಕಣದಲ್ಲಿದ್ದರು.
ಎನ್ ಡಿಎ ಅಭ್ಯರ್ಥಿ ಹರಿವಂಶ ಸಿಂಗ್ 125 ಮತ ಚಲಾವಣೆಯಾದರೆ, ಯುಪಿಎ ಅಭ್ಯರ್ಥಿ ಹರಿಪ್ರಸಾದ್ ಪರ 105 ಮತಗಳು ಬಂದಿವೆ.
ನೂತನ ಉಪಸಭಾಪತಿ ಆಯ್ಕೆಯನ್ನು ಘೋಷಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ಹರಿವಂಶ ಸಿಂಗ್ ಅವರನ್ನು ಅಭಿನಂದಿಸಿದರು.
Hearty congratulations to Sh #HarivanshNarayanSingh ji on winning elections for Deputy Chairman of #RajyaSabha with 125 votes
— Ananthkumar (@AnanthKumar_BJP) August 9, 2018
The Country & both Houses of #Parliament are reposing faith in an increasing manner in the leadership of our PM Sh @narendramodi ji .#NDAplus again ! pic.twitter.com/hJuTsiJQhw
"125 ಮತಗಳನ್ನು ಪಡೆದು ಉಪಸಭಾಪತಿಯಾಗಿ ಆಯ್ಕೆಯಾದ ಹರಿವಂಶ ನಾರಾಯಣ ಸಿಂಗ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಮತ್ತು ಸಂಸತ್ತಿನ ಉಭಯ ಸದನಗಳು ಜನತೆಯ ನಂಬಿಕೆಯನ್ನು ಉಳಿಸಿಕೊಂಡಿವೆ" ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಟ್ವೀಟ್ ಮಾಡಿದ್ದಾರೆ.
ರಾಜ್ಯಸಭೆ ಉಪಸಭಾಪತಿ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ(3 ಮತಗಳಿದ್ದವು) ಬಹಿಷ್ಕರಿಸಿದ್ದರೆ, ಕೊನೆಯ ಕ್ಷಣದಲ್ಲಿ ಟಿಆರ್ ಎಸ್ ಪಕ್ಷ ತನ್ನ ಬೆಂಬಲವನ್ನು ಎನ್ ಡಿಎ ಅಭ್ಯರ್ಥಿಗೆ ನೀಡಿತು.