ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಸಮಿತಿ ಹೊಣೆ ರಾಜನಾಥ್ ಹೆಗಲಿಗೆ

|
Google Oneindia Kannada News

Recommended Video

lok sabha election 2019: ಬಿಜೆಪಿ ಪ್ರಣಾಳಿಕೆ ಸಮಿತಿ ಹೊಣೆ ರಾಜನಾಥ್ ಹೆಗಲಿಗೆ | Oneindia Kannada

ನವದೆಹಲಿ, ಜನವರಿ 07: 2019 ರ ಲೋಕಸಭಾ ಚುನಾವಣೆಗೆ ಈಗಾಗಲೇ ಬಿರುಸಿನ ತಯಾರಿ ಆರಂಭಿಸಿರುವ ಬಿಜೆಪಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಪ್ರಣಾಳಿಕೆ ಸಮಿತಿ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಚುನಾವಣೆ ಫಲಿತಾಂಶವು ಮೋದಿ ಆಡಳಿತದ ಮೌಲ್ಯಮಾಪನ ಅಲ್ಲ: ರಾಜ್ ನಾಥ್ ಸಿಂಗ್ ಚುನಾವಣೆ ಫಲಿತಾಂಶವು ಮೋದಿ ಆಡಳಿತದ ಮೌಲ್ಯಮಾಪನ ಅಲ್ಲ: ರಾಜ್ ನಾಥ್ ಸಿಂಗ್

ಭಾನುವಾರ, ಲೋಕಸಭಾ ಚುನಾವಣೆಯ ತಯಾರಿಗಾಗಿ ಒಟ್ಟು 20 ಸದಸ್ಯರ ತಂಡವೊಂದನ್ನು ದೆಹಲಿಯಲ್ಲಿ ಅಮಿತ್ ಶಾ ನೇಮಿಸಿದರು.

"ಮಂದಿರ,ಗೋವು ಕಾಂಗ್ರೆಸ್ಸಿಗೆ ಚುನಾವಣೆ ಸರಕು,ಬಿಜೆಪಿಗೆ ಅವಿಭಾಜ್ಯ ಸಂಸ್ಕೃತಿ"

ಸಂಕಲ್ಪ ಪತ್ರ(ಪ್ರಣಾಳಿಕೆ) ಸಮಿತಿಯ ಅಧ್ಯಕ್ಷರನ್ನಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ನೇಮಿಸಲಾಯಿತು.

Rajnath Singh to head BJPs manifesto committee for 2019 Lok Sabha polls

ಸಮಿತಿಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರವಿ ಶಂಕರ್ ಪ್ರಸಾದ್, ಪಿಯೂಶ್ ಗೋಯೆಲ್, ಮುಖ್ತಾರ್ ಅಬ್ಬಾಸ್ ನಖ್ವಿ, ಮತ್ತು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದ್ದಾರೆ.

ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಎಂದ ರಾಜ್ ನಾಥ್ ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಎಂದ ರಾಜ್ ನಾಥ್

ಮಾಧ್ಯಮ ಸಮಿತಿಯ ಹೊಣೆಯನ್ನು ಕೇಂದ್ರ ಕಾನೂನು ಸಚಿವ ರವಿ ಶಂಖರ್ ಪ್ರಸಾದ್ ಹೂರಲಿದ್ದಾರೆ.

English summary
The BJP on Sunday appointed senior leaders Rajnath Singh and Arun Jaitley as the head of 20-member 'sankalp patra' (manifesto) committee and publicity wing respectively for the 2019 Lok Sabha Elections
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X