ರಾಜೀವ್ ಗಾಂಧಿ 28ನೇ ಪುಣ್ಯತಿಥಿ: ಪ್ರಧಾನಿ ಮೋದಿ, ಸಿಎಂ ಮಮತಾ ಶ್ರದ್ಧಾಂಜಲಿ
ನವದೆಹಲಿ ಮೇ 21: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 28 ನೇ ಪುಣ್ಯತಿಥಿಯ ಅಂಗವಾಗಿ ದೆಹಲಿಯ ವೀರ ಭೂಮಿಯ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಗಾಂಧಿ ಕುಟುಂಬದವರಲ್ಲದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರು ವೀರ ಭೂಮಿಯಲ್ಲಿ ಉಪಸ್ಥಿತರಿದ್ದರು.
ರಾಜೀವ್ ಗಾಂಧಿ ಹಂತಕ ಪೇರರಿವಾಳನ್ ಬಿಡುಗಡೆ: ಸುಪ್ರೀಂ ತೀರ್ಪು
ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ನಲ್ಲಿ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. "ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.
Tributes to former PM Shri Rajiv Gandhi on his death anniversary.
— Narendra Modi (@narendramodi) May 21, 2019
ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅವರ ಮೇಲೆ ದಾಳಿ ಮಾಡಿದ ಅಪರಾಧಿಯನ್ನು ಬಿಡುಗಡೆಯಾಗಿದ್ದರಿಂದ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಟೀಕಿಸಿವೆ.
My father was gentle, loving, kind & affectionate. He taught me to love & respect all beings. To never hate. To forgive.
— Rahul Gandhi (@RahulGandhi) May 21, 2019
I miss him.
On his death anniversary, I remember my father with love & gratitude.#RememberingRajivGandhi pic.twitter.com/sYPGu5jGFC
1991 ರಲ್ಲಿ ರಾಜೀವ್ ಗಾಂಧಿ ಅವರನ್ನು ತಮಿಳುನಾಡಿನ ಶ್ರೀಪೆರಂಬದೂರ್ ಪಟ್ಟಣದಲ್ಲಿ ನಡೆದ ರ್ಯಾಲಿಯಲ್ಲಿ ಎದೆಗೆ ಬಾಂಬ್ ಕಟ್ಟಿಕೊಂಡು ಸ್ವಾಗತಿಸಿದ ಪ್ರತ್ಯೇಕತಾವಾದಿ ಲಂಕಾ ತಮಿಳು ಸಂಘಟನೆ ಎಲ್ಟಿಟಿಇಯ ಮಹಿಳಾ ಕಾರ್ಯಕರ್ತೆಯೊಬ್ಬರು ಹತ್ಯೆಗೈದರು. ರಾಜೀವ್ ಗಾಂಧಿ ಅವರ ಪುಣ್ಯತಿಥಿಯನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿಯೂ ಆಚರಿಸಲಾಗುತ್ತದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಳಿಗ್ಗೆ ಟ್ವೀಟ್ ಮಾಡಿ: "ನನ್ನ ತಂದೆ ಸೌಮ್ಯ, ಪ್ರೀತಿ, ದಯೆ ಮತ್ತು ವಾತ್ಸಲ್ಯ ಹೊಂದಿದ್ದರು. ಅವರು ನನಗೆ ಎಲ್ಲಾ ಜೀವಿಗಳನ್ನು ಪ್ರೀತಿಸಲು ಮತ್ತು ಗೌರವಿಸಲು ಕಲಿಸಿದರು. ಎಂದಿಗೂ ದ್ವೇಷಿಸಬೇಡಿ ಕ್ಷಮಿಸಿ ಎನ್ನುತ್ತಿದ್ದ ಅವರನ್ನು ನಾನು ಕಳೆದುಕೊಂಡಿದ್ದೇನೆ. ಅವರ ಮರಣ ವಾರ್ಷಿಕೋತ್ಸವದಂದು ನಾನು ನನ್ನ ತಂದೆಯನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇನೆ" ಎಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಮಾಜಿ ಪ್ರಧಾನಿಯನ್ನು ನೆನಪಿಸಿಕೊಂಡರು.
Solemnly and very fondly remembering former Prime Minister Rajiv Gandhi on his death anniversary
— Mamata Banerjee (@MamataOfficial) May 21, 2019
ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ಸರಣಿ ಟ್ವೀಟ್ಗಳಲ್ಲಿ ಭಾರತದ ಅತ್ಯಂತ ಕಿರಿಯ ಪ್ರಧಾನಿಗೆ ಗೌರವ ಸಲ್ಲಿಸಿದರು. "21 ನೇ ಶತಮಾನದಲ್ಲಿ ಭಾರತದ ಕನಸು ಕಂಡ ಈ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ದಿನ ಮತ್ತು ಅದೇ ಸಮಯದಲ್ಲಿ ಭಾರತಕ್ಕೆ ಅವರ ಕೊಡುಗೆಯನ್ನು ಪ್ರತಿಬಿಂಬಿಸುವ ದಿನ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಸ್ಯಾಮ್ ಪಿತ್ರೋಡಾ ಅವರೊಂದಿಗೆ ಕೆಲಸ ಮಾಡಿದವರು.