ಬಿಜೆಪಿಯ ಎಲ್ಲಾ ಚೌಕಿದಾರರೂ ಚೋರರೇ! ರಾಹುಲ್ ಗಾಂಧಿ ಟ್ವೀಟ್
ನವದೆಹಲಿ, ಮಾರ್ಚ್ 22: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಹೈಕಮಾಂಡಿಗೆ ಕಪ್ಪ ನೀಡಿದ್ದಾರೆ ಎಂದು ಆರೋಪಿಸಲಾದ ಡೈರಿಯನ್ನು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಬಿಡುಗಡೆ ಮಾಡಿದ್ದು, ಆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಹೈಕಮಾಂಡಿಗೆ ಕಪ್ಪ ಆರೋಪ: ಸಾಕ್ಷಿ ನೀಡಿ ಉತ್ತರಿಸಿದ ಬಿಜೆಪಿ
ಈ
ಡೈರಿಯವ
ಕುರಿತ
ಸುದ್ದಿಯನ್ನು
ಉಲ್ಲೇಖಿಸಿರುವ
ರಾಹುಲ್
ಗಾಂಧಿ,
'ಬಿಜೆಪಿ
ಕೆ
ಸಾರೆ
ಚೌಕಿದಾರ್
ಚೋರ್
ಹೈ.'
ನಮೋ
ಅರುಣ್
ಜೇಟ್ಲಿ
ರಾಜನಾಥ್
ಸಿಂಗ್
....
...
BJP ke sare Chowkidar Chor Hai.
— Rahul Gandhi (@RahulGandhi) March 22, 2019
NoMo
Arun Jaitley
Rajnath Singh
——-
——-
——- https://t.co/jRmdkYjAhg
ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಅವರು ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಡೈರಿಯಲ್ಲಿ ಉಲ್ಲೇಖವಿದೆ. ಅರುಣ್ ಜೇಟ್ಲಿ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಸೇರಿದಂತೆ ವಿವಿಧ ನಾಯಕರಿಗೆ 1800 ಕೋಟಿ ರು ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಗ್ರಹಿಸಿದ್ದರು.
ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿ ನಕಲಿ, ಆರೋಪವೆಲ್ಲ ಸುಳ್ಳು: ಯಡಿಯೂರಪ್ಪ
ವಿಎಸ್ ಉಗ್ರಪ್ಪ, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿಯನ್ನು 2017ರಲ್ಲಿ ಬಿಡುಗಡೆ ಮಾಡಿದ್ದರು.
ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿರುವುದು ಯಡಿಯೂರಪ್ಪ ಅವರ ಕೈಬರಹವಲ್ಲ ಎಂದು ಬಿಜೆಪಿ ಸಾಕ್ಷಿ ಸಮೇತ ಟ್ವೀಟ್ ಮಾಡಿತ್ತು.