ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಗೆ ನಿದ್ದೆ ಮಾಡೋಕೆ ಬಿಡಲ್ಲ ಎಂದ ರಾಹುಲ್ ಗಾಂಧಿ

|
Google Oneindia Kannada News

Recommended Video

ಪ್ರಧಾನಿ ಮೋದಿಗೆ ನಿದ್ದೆ ಮಾಡೋಕೆ ಬಿಡಲ್ಲ ಎಂದ ರಾಹುಲ್ ಗಾಂಧಿ | Oneindia Kannada

ನವದೆಹಲಿ, ಡಿಸೆಂಬರ್ 18: 'ರೈತರ ಸಾಲಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ದೆ ಮಾಡಲು ನಾವು ಬಿಡುವುದಿಲ್ಲ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ಗಂಟೆಯ ಒಳಗಾಗಿ ರೈತರ ಸಾಲಮನ್ನಾ ಮಾಡಿದೆ. ಈ ಮೂಲಕ ಆದರ್ಶವಾಗಿದೆ. ಈ ಎರಡು ರಾಜ್ಯಗಳನ್ನೇ ಉದಾಹರಣೆಯಾಗಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು" ಎಂದು ರಾಹುಲ್ ಗಾಂಧಿ ಹೇಳಿದರು.

ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?ರಾಹುಲ್ ಗಾಂಧಿಗೇ ಪ್ರಧಾನಿ ಪಟ್ಟ: ಸ್ಟಾಲಿನ್ ತರ್ಕವೇನು?

ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ನಾವು ಸಾಲಮನ್ನಾ ಮಾಡುತ್ತೇವೆ ಎಂದು ಅವರು ಅಭಯ ಸಹ ನೀಡಿದರು.

ಮೋದಿಯಿಂದ ಇಬ್ಬಗೆ ಭಾರತ ನಿರ್ಮಾಣ

ಮೋದಿಯಿಂದ ಇಬ್ಬಗೆ ಭಾರತ ನಿರ್ಮಾಣ

ಪ್ರಧಾನಿ ಮೋದಿಯವರು ಇಬ್ಬಗೆಯ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಒಂದು ರೈತರು, ಬಡವರು, ಯುವಕರು ಮತ್ತು ಇನ್ನಿತರ ಸಣ್ಣ ಉದ್ಯಮಿಗಳು. ಇನ್ನೊಂದು ಭಾರತದಲ್ಲಿದೇಶದ ಅಗ್ರ 15 ಉದ್ಯಮಿಗಳನ್ನು ಅವರು ಬೆಳೆಸುತ್ತಿದ್ದಾರೆ ಎಂದು ಅವರು ದೂರಿದರು.

ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ.

ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರು ಒಂದು ಕ್ಷಣ ನಿದ್ದೆ ಮಾಡುವುದಕ್ಕೆ, ಒಂದು ಕ್ಷಣವೂ ವಿಶ್ರಾಂತಿ ಪಡೆಯುವುದಕ್ಕೆ ನಾವು ಬಿಡುವುದಿಲ್ಲ. ಅವರು ರೈತರ ಸಾಲಮನ್ನಾ ಮಾಡಬೇಕು. ಇಂದಿನವರೆಗೂ ಪ್ರಧಾನಿ ಮೋದಿ ಒಂದೇ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಿಲ್ಲ- ರಾಹುಲ್ ಗಾಂಧಿ

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಸ್ಟಾಲಿನ್ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಸ್ಟಾಲಿನ್

ಅಪನಗದೀಕರಣ ಅತೀ ದೊಡ್ಡ ಹಗರಣ

ಅಪನಗದೀಕರಣ ಅತೀ ದೊಡ್ಡ ಹಗರಣ

ಅಪನಗದೀಕರಣವೇ ಈ ದೇಶದ ಬಹುದೊಡ್ಡ ಹಗರಣ. ಜೆಪಿಸಿ(ಜಂಟಿ ಸಂಸದೀಯ ಮಂಡಳಿ), ರಫೇಲ್, ರೈತರ ಸಾಲಮನ್ನಾ, ಅಪನಗದೀಕರಣ ಮುಂತಾದ ಪ್ರಮಾದಗಳು ಸದ್ಯದಲ್ಲೇ ಹೊರಬರಲಿವೆ. ಜನರಿಗೆ ಸುಳ್ಳು ಹೇಳಲಾಗುತ್ತಿದೆ. ಅವರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಅಪನಗದೀಕರಣ ಈ ದೇಶದ ಬಹುದೊಡ್ಡ ಹಗರಣ- ರಾಹುಲ್ ಗಾಂಧಿ

ಸಜ್ಜನ್ ಕುಮಾರ್ ಬಗ್ಗೆ ಸೊಲ್ಲೆತ್ತದ ರಾಹುಲ್

ಸಜ್ಜನ್ ಕುಮಾರ್ ಬಗ್ಗೆ ಸೊಲ್ಲೆತ್ತದ ರಾಹುಲ್

1984 ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ನೀಡಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಲು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು. ಸಿಖ್ ದಂಗೆಯ ಬಗ್ಗೆ ನನ್ನ ನಿಲುವನ್ನು ಈ ಮೊದಲೇ ನಾನು ಸ್ಪಷ್ಟಪಡಿಸಿದ್ದೇನೆ. ಈ ಪತ್ರಿಕಾಗೋಷ್ಠಿ ಏರ್ಪಡಿಸಿದ್ದು ರೈತರ ಬಗ್ಗೆ ಮಾತನಾಡುವುದಕ್ಕೆ ಮತ್ತು ರೈತರ ಸಾಲಮನ್ನಾಗಿ ಪ್ರಧಾನಿಯವರನ್ನು ಒತ್ತಾಯಿಸುವುದಕ್ಕೆ. ಬೇರೆ ವಿಷಯಗಳ ಬಗ್ಗೆ ಮಾತನಾಡಲು ನಾನು ಬಯಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಜ್ಜನ್ ಕುಮಾರ್ ರಾಜೀನಾಮೆಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸಜ್ಜನ್ ಕುಮಾರ್ ರಾಜೀನಾಮೆ

English summary
Rahul Gandhi said, We will not let PM Modi sleep till he waives of loans of farmers, all opposition parties will unitedly demand this. Till now PM has not waived off a single rupee of farmers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X