ಅತ್ಯುತ್ತಮ ಪ್ರಧಾನಿಯಾಗುವ ಎಲ್ಲಾ ಅರ್ಹತೆ ರಾಹುಲ್ ಗಿದೆ: ತರೂರ್
ನವದೆಹಲಿ, ಮೇ 07: ಒಬ್ಬ ಅತ್ಯುತ್ತಮ ಪ್ರಧಾನಿಯಾಗಲು ಬೇಕಾದ ಎಲ್ಲಾ ಅರ್ಹತೆಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿದೆ"' ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ವಯನಾಡಿನಲ್ಲೂ ರಾಹುಲ್ ಗೆ ಗೆಲುವು, ಮೋದಿಗೆ ಸಾಧ್ಯವಿಲ್ಲ: ತರೂರ್
ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವುದು ದಕ್ಷಿಣದ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ. ದಕ್ಷಿಣ ಭಾರತವನ್ನು ಮೋದಿ ಸರ್ಕಾರ ಕಡೆಗಣಿಸುತ್ತಿದೆ ಎಂಬ ಆರೋಪವಿದೆ. ಆದ್ದರಿಂದಲೇ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ತರೂರ್ ಹೇಳಿದರು.
ಟಿಪ್ಪುಗೆ ಸಲಾಂ ಎಂದ ಇಮ್ರಾನ್ ಖಾನ್ ಗೆ ಬಹುಪರಾಕ್ ಎಂದ ಶಶಿ ತರೂರ್!
"ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳತ್ತ ಮಲತಾಯಿ ಧೋರಣೆ ತೋರಿಸಿರುವುದಕ್ಕೆ ಹಲವು ನಿದರ್ಶನಗಳಿವೆ. ಆದರೆ ಅಂಥ ನಡೆಯನ್ನು ವಿರೋಧಿಸುವ ಮೊದಲನೇ ಹೆಜ್ಜೆಯಾಗಿ ರಾಹುಲ್ ಗಾಂಧಿ ಅವರು ವಯನಾಡಿನಿಂಡ ಸ್ಪರ್ಧಿಸುತ್ತಿದ್ದಾರೆ. ಯಾವ ರಾಜ್ಯವನ್ನು ಕಡೆಗಣಿಸಬಾರದು, ಎಲ್ಲವನ್ನೂ ಸಮಾನವಾಗಿ ನೋಡಬೇಕು ಎಂಬುದು ಕಾಂಗ್ರೆಸ್ ನಂಬಿರುವ ಸಿದ್ಧಾಂತ" ಎಂದು ತರೂರ್ ಹೇಳಿದರು.
ಕೇರಳದಲ್ಲಿ ಎಷ್ಟೋ ಜನರು ಕೇಂದ್ರ ಸರ್ಕಾರದ ಮೇಲೆ ಮುನಿಸಿಕೊಂಡಿರುವುದಕ್ಕೆ ಇದೇ ಕಾರಣ. ಅವರೆಲ್ಲರಿಗೂ ಕಾಂಗ್ರೆಸ್ ಒಂದು ಪರ್ಯಾಯವಾಗಿ ಕಾಣಿಸಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗೆಲ್ಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.