ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನವದೆಹಲಿಯ ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರೊ.ಸಿದ್ದರಾಮಯ್ಯ
ನವದೆಹಲಿ, ಫೆಬ್ರವರಿ.06: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ ನೇತೃತ್ವದ ನಿಯೋಗವು ನವದೆಹಲಿಯ ಕರ್ನಾಟಕ ಭವನದಲ್ಲಿ ಫೆ.6ರಂದು ಕರ್ನಾಟಕ ಭವನದ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ, ದೆಹಲಿಯ ಕರ್ನಾಟಕ ಭವನದ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಕ್ಕೆ ತಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಸಯ್ಯದ್ ಮೊಹಿದ್ ಅಲ್ತಾಫ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಬಿ.ಟಿ. ಲಲಿತ ನಾಯಕ್, ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ನಿಲಯ ಮಿತಾಷ್, ಕೆಡಿಎ ಕಾರ್ಯದರ್ಶಿ ಡಾ.ಕೆ.ಮುರಳೀಧರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಿಎಫ್ ನಾಯಕ್, ಡಾ.ಸಿದ್ದಲಿಂಗಯ್ಯ, ಜೆ ಪ್ರಭಾಕರ ಪಾಟೀಲ್, ಪ್ರೊ.ಕಾಳೇಗೌಡ ಹಾಜರಿದ್ದರು.
Comments
English summary
Kannada development authority delegation led by Prof SG Siddaramaiah had meeting at Karnataka Bhavan in New Delhi on Feb.06.
Story first published: Wednesday, February 6, 2019, 15:05 [IST]