ದೇಶದಲ್ಲಿ ಕೊರೊನಾ ಆತಂಕ; ರಾಷ್ಟ್ರಪತಿ ಕೋವಿಂದ್ ಏನಂದ್ರು?
ನವದೆಹಲಿ, ಮಾರ್ಚ್ 20: ಕೊರೊನಾ ವೈರಸ್ (ಕೋವಿಡ್19) ದೇಶದಲ್ಲಿ ಆತಂಕಕಾರಿ ವಾತಾವರಣವನ್ನು ಸೃಷ್ಟಿಸಿದೆ. ಈ ಬಗ್ಗೆ ದೇಶವಾಸಿಗಳಿಗೆ ದೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ಈ ಕುರಿತು ಶುಕ್ರವಾರ ದೇಶವಾಸಿಗಳಿಗೆ ಸಂದೇಶ ನೀಡಿರುವ ಅವರು, ಕೊರೊನಾ ವೈರಸ್ ನಮಗೆ ಪ್ರಕೃತಿ ಕಲಿಸಿದ ಪಾಠವಾಗಬೇಕಿದೆ. ವಿಪತ್ತಿನ ಸಾಂಕ್ರಾಮಿಕ ರೋಗಗಳು ಹೊಸದಲ್ಲ. ಆದರೆ, ಕೊರೊನಾ ಎಂಬುದು ನಮಗೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ಕೋವಿಂದ್ ಹೇಳಿದ್ದಾರೆ.
ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?
ಮಹಾಮಾರಿ ವೈರಸ್ನೊಂದಿಗೆ ಹೋರಾಡುವ ಎಲ್ಲರೊಂದಿಗೆ, ಪ್ರಪಂಚದಾದ್ಯಂತದ ಇದಕ್ಕೆ ಬಲಿಯಾದ ಜನರ ಕುಟುಂಬಗಳೊಂದಿಗೆ, ಮತ್ತು ವೈದ್ಯರು, ಅರೆವೈದ್ಯರು ಮತ್ತು ಆರೋಗ್ಯ ಅಧಿಕಾರಿಗಳು ಮತ್ತು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವವರೊಂದಿಗೆ ನಾವಿದ್ದೇವೆ ಎಂದು ಅವರು ದೈರ್ಯ ತುಂಬಿದ್ದಾರೆ.
ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಯು ಅಸಾಧಾರಣ ಮತ್ತು ವಿಕಾಸಗೊಳ್ಳುತ್ತಿರುವ ಸವಾಲನ್ನು ಎದುರಿಸುವಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ತೋರಿಸಿದೆ. ನಮ್ಮ ನಾಯಕತ್ವ ಮತ್ತು ಆಡಳಿತವು ಈ ಪರೀಕ್ಷಾ ಕಾಲದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಸಾಂಕ್ರಾಮಿಕ ರೋಗವನ್ನು ಮೊದಲಿನಿಂದಲೂ ತಡೆಗಟ್ಟಲು ಸರಿಯಾದ ಶ್ರದ್ಧೆಯಿಂದ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಮತ್ತು ನೆರೆಹೊರೆಯಲ್ಲಿ ಅದರ ಹರಡುವಿಕೆಯನ್ನು ಪರಿಶೀಲಿಸಲು ಜಂಟಿ ಪ್ರಯತ್ನಗಳನ್ನು ಪ್ರಾರಂಭಿಸಲು ಸಾರ್ಕ್ನಲ್ಲಿರುವ ದೇಶಗಳನ್ನು ತಲುಪಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸುತ್ತೇನೆ ಎಂದು ಅವರು ಹೇಳಿದ್ದಾರೆ.