ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಕಾಶ್‌ ರೈ ಹೊಗಳಿ ಟ್ವೀಟ್ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಜನವರಿ 10: ಇಂದು ಪ್ರಕಾಶ್ ರೈ ಅವರು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ನಂತರ ಪ್ರಕಾಶ್ ರೈ ಅವರನ್ನು ಹೊಗಳಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಪ್ರಕಾಶ್ ರೈ ಪ್ರಕಟಿಸಿದ ಬಳಿಕ ಆಪ್ ಪಕ್ಷವು ಪ್ರಕಾಶ್‌ ರೈಗೆ ಬೆಂಬಲ ಕೊಡುವುದಾಗಿ ಹೇಳಿತ್ತು. ಹಾಗಾಗಿ ಪ್ರಕಾಶ್ ರೈ ಅವರು ಆಪ್‌ ಮುಖಂಡ ಅರವಿಂದ ಕೇಜ್ರಿವಾಲ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಆಗಿದ್ದರು.

ಮಹಿಳೆಯರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ವಾಗ್ದಾಳಿ; ಬೆಂಬಲಕ್ಕೆ ನಿಂತ ಪ್ರಕಾಶ್ ರೈಮಹಿಳೆಯರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ವಾಗ್ದಾಳಿ; ಬೆಂಬಲಕ್ಕೆ ನಿಂತ ಪ್ರಕಾಶ್ ರೈ

ಪ್ರಕಾಶ್ ರೈ ಅವರಂತಹಾ ವ್ಯಕ್ತಿಗಳು ಲೋಕಸಭೆ ಒಳಗೆ ಪ್ರವೇಶ ಮಾಡಬೇಕು, ಆಪ್ ಪಕ್ಷವು ಪ್ರಕಾಶ್ ರೈ ಅವರನ್ನು ಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಕೇಜ್ರಿವಾಲ್ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.

Prakash Raj met Delhi CM Arvind Kejriwal thank him for support

ಮುಂದುವರೆದು, ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವ ಪ್ರಕಾಶ್ ರೈ ಅವರ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಲೋಕಸಭೆಯೊಳಗೆ ಪಕ್ಷಾತೀತವಾದ ಧ್ವನಿಗಳೂ ಸಹ ಇರಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲಲೋಕಸಭೆ ಚುನಾವಣೆ: ಪ್ರಕಾಶ್‌ರಾಜ್‌ಗೆ ಆಮ್‌ಆದ್ಮಿ ಪಕ್ಷ ಬೆಂಬಲ

ಇದೇ ಭೇಟಿಯ ಬಗ್ಗೆ ಬೆಳಿಗ್ಗೆ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ಬೆಂಬಲ ಸೂಚಿಸಿದ್ದಕ್ಕೆ ಆಪ್‌ಗೆ ಮತ್ತು ಕೇಜ್ರಿವಾಲ್‌ಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಸಮಸ್ಯೆಗಳ ಕುರಿತು ಚರ್ಚಿಸುವ ವಿಧಾನಗಳನ್ನು ಹಂಚಿಕೊಳ್ಳಿ ಎಂದು ಕೇಜ್ರಿವಾಲ್ ಅವರ ಸಹಾಯವನ್ನೂ ಪ್ರಕಾಶ್‌ ರೈ ಕೋರಿದ್ದಾರೆ.

English summary
Prakash Raj met Delhi CM and AAP leader Arvind Kejriwal today in Delhi. He thanked him for extending support for MP elections. Arvind Kejriwal said 'people need Prakash Raj kind of people in parliament'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X