ಕಪಿಲ್ ಮಿಶ್ರಾ ಬಗ್ಗೆ ಮಾತನಾಡದೆ ಪ್ರಶ್ನೆಯಿಂದ ನುಣುಚಿಕೊಂಡ ಜಾವಡೇಕರ್
ನವದೆಹಲಿ, ಫೆಬ್ರವರಿ 27: ಹಿಂಸೆಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ಹಿರಿಯ ಮುಖಂಡ ಕಪಿಲ್ ಮಿಶ್ರಾ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನುಣುಚಿಕೊಂಡಿದ್ದಾರೆ.
ವಿವಾದಾತ್ಮಕ
ಪೌರತ್ವ
ತಿದ್ದುಪಡಿ
ಕಾಯ್ದೆ
ಕುರಿತು
ದೆಹಲಿಯಲ್ಲಿ
ನಡೆದ
ಘರ್ಷಣೆ
ಹಿಂಸಾಚಾರದ
ಕುರಿತು
ಹೈಕೋರ್ಟ್ನಲ್ಲಿ
ಅರ್ಜಿ
ವಿಚಾರಣೆ
ನಡೆಸುತ್ತಿದ್ದ
ಸಂದರ್ಭದಲ್ಲಿ
,ನ್ಯಾಯಮೂರ್ತಿಯೊಬ್ಬರು
ಕಪಿಲ್
ಮಿಶ್ರಾ
ಅವರ
ಭಾಷಣದ
ವಿಡಿಯೋ
ತುಣುಕನ್ನು
ಪ್ರದರ್ಶಿಸಲು
ಅವಕಾಶ
ನೀಡಿದ್ದರು.
ಈ
ಕುರಿತು
ಪ್ರಶ್ನೆ
ಎನ್ಡಿಟಿವಿ
ಸಂದರ್ಶನದಲ್ಲಿ
ಪ್ರಶ್ನಿಸಿದಾಗ
ನ್ಯಾಯಾಲಯದಲ್ಲಿ
ಪ್ರಕರಣದ
ವಿಚಾರಣೆ
ನಡೆಯುತ್ತಿದೆ
ನಾನು
ಏನೂ
ಹೇಳುವುದಿಲ್ಲ
ಎಂದು
ಹೇಳಿದರು.
ಮೋದಿಯನ್ನು ಐಎಸ್ಐ ಏಜೆಂಟ್ ಎಂದಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಯಾರು?
ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಜನರನ್ನು ಪ್ರಚೋದಿಸಿದ್ದಕ್ಕಾಗಿ ಅವರ ವಿರುದ್ಧ ಎರಡು ದೂರುಗಳು ಈಗಾಗಲೇ ದಾಖಲಾಗಿವೆ.
ವಿಡಿಯೋ
ಮತ್ತು
ನ್ಯಾಯಾಲಯದ
ವಿಚಾರಣೆಯ
ಬಗ್ಗೆ
ಕೇಂದ್ರ
ಸಚಿವ
ಪ್ರಕಾಶ್
ಜಾವಡೇಕರ್
ಅವರನ್ನು
ಪ್ರಶ್ನಿಸಿದಾಗ,
ಅವರು
ಉತ್ತರ
ನೀಡಲು
ನಿರಾಕರಿಸಿದರು.
ಹೆಚ್ಚಿನ
ಪ್ರಶ್ನೆಗಳನ್ನು
ಕೇಳಬೇಡಿ
ನ್ಯಾಯಾಲಯದಲ್ಲಿ
ವಿಚಾರಣೆಯನ್ನು
ಮುಂದುವರೆಸೋಣ
ಎಂದು
ಪ್ರಶ್ನೆಯನ್ನು
ತಳ್ಳಿ
ಹಾಕಿದರು.
ನಾನು
ನೀಡಬೇಕಿದ್ದ
ಹೇಳಿಕೆಯನ್ನು
ನೀಡಿದ್ದೇನೆ
ಎಲ್ಲರಿಗೂ
ಧನ್ಯವಾದ
ಎಂದು
ಹೇಳಿ
ಸುಮ್ಮನಾದರು.
ಇನ್ನೊಂದೆಡೆ
ಇದುವರೆಗೂ
ದೆಹಲಿ
ಹಿಂಸಾಚಾರದಲ್ಲಿ
29ಕ್ಕೂ
ಅಧಿಕ
ಮಂದಿ
ಮೃತಪಟ್ಟಿದ್ದು
200ಕ್ಕೂ
ಹೆಚ್ಚು
ಮಂದಿ
ಗಾಯಗೊಂಡಿದ್ದಾರೆ.
ಹೀಗಾಗಿ
ಗೃಹ
ಸಚಿವ
ಅಮಿತ್
ಶಾ
ನೈತಿಕ
ಹೊಣೆ
ಹೊತ್ತು
ರಾಜೀನಾಮೆ
ನೀಡಲೇಬೇಕು
ಎಂದು
ಕಾಂಗ್ರೆಸ್
ಅಧ್ಯಕ್ಷೆ
ಸೋನಿಯಾ
ಗಾಂಧಿ
ಒತ್ತಾಯಿಸಿದ್ದಾರೆ.
ಕಪಿಲ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಗೌತಮ್ ಗಂಭೀರ್ ಆಗ್ರಹ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕುರಿತು ಮಾತನಾಡಿದ ಜಾವಡೇಕರ್ ಕಾಂಗ್ರೆಸ್ ಅವರ ಕೈಯಲ್ಲಿ ಸಿಖ್ಖರ ರಕ್ತವಿದೆ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಲು ಅವರು ಯಾರು ಎಂದು ಪ್ರಶ್ನಿಸಿದರು.
1984ರ ಸಿಖ್ ವಿರೋಧಿ ದಂಗೆ ನಡೆಸಿದ ಕಾಂಗ್ರೆಸ್ನಿಂದ ನಮಗೆ ಶಾಂತಿ ಮಂತ್ರ ಬೇಕಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ.