ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜೈಲಿನಲ್ಲಿ ಕಿರುಕುಳ ತಾಳಲಾರದೆ ಸಾಧ್ವಿ ಪ್ರಜ್ಞಾಗೆ ಕ್ಯಾನ್ಸರ್ ಬಂತು'

|
Google Oneindia Kannada News

ನವದೆಹಲಿ, ಏಪ್ರಿಲ್ 27: "ರಾಷ್ಟ್ರವಾದಿ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಒಂಬತ್ತು ವರ್ಷಗಳ ಕಾಲ ಸತತ ಕಿರುಕುಳ ನೀಡಿದ್ದರಿಂದ, ಆ ಒತ್ತಡದಿಂದಲೇ ಕ್ಯಾನ್ಸರ್ ಕಾಯಿಲೆ ಆರಂಭವಾಗಿತ್ತು" ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ."ಯಾವ ತಪ್ಪೂ ಮಾಡದ ಸಾಧ್ವಿ ಅವರನ್ನು ಒಂಬತ್ತು ವರ್ಷ ಜೈಲಿನಲ್ಲಿ ಹಿಂಸಿಸಲಾಯ್ತು. ದೌರ್ಜನ್ಯ ಮಾಡಲಾಯ್ತು. ಅವರ ಮೇಲೆ ನಡೆದ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳ ಒತ್ತಡ ತಾಳಲಾರದೆ ಅವರು ಕ್ಯಾನ್ಸರ್ ಗೆ ತುತ್ತಾಗುವಂತಾಯ್ತು" ಎಂದು ರಾಮದೇವ್ ಹೇಳಿದರು.

ಗೋಮೂತ್ರದಿಂದ ನನ್ನ ಸ್ತನ ಕ್ಯಾನ್ಸರ್ ಗುಣವಾಯ್ತು: ಸಾಧ್ವಿ ಪ್ರಗ್ಯಾಗೋಮೂತ್ರದಿಂದ ನನ್ನ ಸ್ತನ ಕ್ಯಾನ್ಸರ್ ಗುಣವಾಯ್ತು: ಸಾಧ್ವಿ ಪ್ರಗ್ಯಾ

Pragya Singh gets cancer because of torture in Jail: Baba Ramdev

ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ಉಪಸ್ಥಿತರಿದ್ದ ರಾಮದೇವ್, ಸಾಧ್ವಿ ಅವರ ಪರವೂ ಪ್ರಚಾರ ಮಾಡಿದರು.

ದಿಗ್ವಿಜಯ್ ಸಿಂಗ್ ಭಯೋತ್ಪಾದಕ ಎಂದ ಪ್ರಜ್ಞಾಗೆ ಚು.ಆಯೋಗ ನೋಟಿಸ್ದಿಗ್ವಿಜಯ್ ಸಿಂಗ್ ಭಯೋತ್ಪಾದಕ ಎಂದ ಪ್ರಜ್ಞಾಗೆ ಚು.ಆಯೋಗ ನೋಟಿಸ್

2008 ರ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಧ್ವಿ ಜಾಮೀನಿನ ಮೇಲೆ ಹೊರಬಂದಿದ್ದರು. ಈ ಬಾರಿಯ ಲೋಕಸಬಾ ಚುನಾವಣೆಗೆ ಬಿಜೆಪಿ, ಸಾಂಧ್ವಿ ಅವರಿಗೆ ಮಧ್ಯಪ್ರದೇಶದ ಭೋಪಾಲ್ ನಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸಾಧ್ವಿ ಎದುರಿಸಲಿದ್ದಾರೆ.

English summary
Yoga Guru Baba Ramdev said, Pragya Singh Thakur, the BJP candidate from Bhopal for Lok Sabha elections 2019, had diagnosed with cancer because of continuous torture in jail.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X