ಮೋದಿ ವಿರುದ್ಧದ ದೂರು ನಾಪತ್ತೆ; ತಾಂತ್ರಿಕ ದೋಷ ಅಂತಿದೆ ಚು.ಆಯೋಗ
ನವದೆಹಲಿ, ಏಪ್ರಿಲ್ 25: ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಚುನಾವಣೆ ಪ್ರಚಾರ ವೇಳೆ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ದಾಖಲಿಸಿದ್ದ ದೂರು ಚುನಾವಣೆ ಆಯೋಗದ ವೆಬ್ ಸೈಟ್ ನಿಂದ ನಾಪತ್ತೆಯಾಗಿದೆ. ಈ ವರೆಗೆ 426 ದೂರುಗಳು ಆಯೋಗಕ್ಕೆ ಬಂದಿದ್ದು, ಅದರ ಪಟ್ಟಿಯನ್ನು ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಹಾಕಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆದರೆ, ಏಪ್ರಿಲ್ ಒಂಬತ್ತನೇ ತಾರೀಕಿನಂದು ಪ್ರಧಾನಿ ಮೋದಿ ವಿರುದ್ಧ ದಾಖಲಾದ ಇದೊಂದು ದೂರು ಮಾತ್ರ ಕಾಣುತ್ತಿಲ್ಲ. "ಪುಲ್ವಾಮಾ ಹುತಾತ್ಮರಿಗಾಗಿ" ಹಾಗೂ ಬಾಲಾಕೋಟ್ ದಾಳಿ ನಡೆಸಿದ ಯೋಧರಿಗಾಗಿ ನಿಮ್ಮ ಮತ ಅರ್ಪಣೆ ಮಾಡಿ ಎಂದು ಮೋದಿ ಹೇಳಿದ್ದರು. ಈ ಹೇಳಿಕೆ ವಿರುದ್ಧ ಕೋಲ್ಕತ್ತಾ ಮೂಲದ ಮಹೇಂದ್ರ ಸಿಂಗ್ ಎಂಬುವವರು ದೂರು ದಾಖಲಿಸಿದ್ದರು.
ನೀತಿಸಂಹಿತೆ ಉಲ್ಲಂಘಿಸಿದರೇ ಮೋದಿ? ಚುನಾವಣೆ ಆಯೋಗದ ಕೆಂಗಣ್ಣು?!
ಎರಡು ದಿನಗಳ ನಂತರ, ಭಾಷಣದ ಪೂರ್ಣ ಪಾಠ ಹಾಗೂ ಸಂಪುರ್ಣ ವರದಿ ಸಲ್ಲಿಸುವಂತೆ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿಗೆ ಕೇಳಿತ್ತು. ಇದೀಗ ದೂರಿನ ಸ್ಥಿತಿಯ ಬಗ್ಗೆ ಗೊಂದಲ ಎದುರಾಗಿದೆ. ಮಹೇಂದ್ರ ಸಿಂಗ್ ಹೇಳುವ ಪ್ರಕಾರ, ದೂರಿನ ಸ್ಥಾನಮಾನ ಪರಿಶೀಲಿಸಲು ವೆಬ್ ಸೈಟ್ ನೋಡಿದರೆ, 'ವಿಲೇವಾರಿ ಆಗಿದೆ' ಎಂದು ಬರುತ್ತಿದೆಯಂತೆ.
ಚುನಾವಣೆ ಆಯೋಗ ಬುಧವಾರ ಸಂಜೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ವಿಲೇವಾರಿ ಆಗಿದೆ ಎಂದು ತೋರಿಸುವ ಬದಲಿಗೆ ಮಾಹಿತಿಯನ್ನು ಚುನಾವಣೆ ಆಯೋಗದ ಮುಖ್ಯ ಕಚೇರಿಗೆ ಕಳುಹಿಸಲಾಗಿದೆ ಎಂದು ತೋರಿಸಬೇಕು ಎಂದಿದೆ. ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಸಂಬಂಧಪಟ್ಟ ಅಧಿಕಾರಿಯಿಂದ ಗುರುವಾರ ಮಧ್ಯಾಹ್ನ ಒಂದು ಗಂಟೆಯೊಳಗೆ ವಿವರಣೆ ನೀಡುವಂತೆ ಕೇಳಿದ್ದಾರೆ.
ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ದೂರು
ತಾಂತ್ರಿಕ ದೋಷದಿಂದ ವೆಬ್ ಸೈಟ್ ನಲ್ಲಿ ಹೀಗೆ ತಪ್ಪು ಮಾಹಿತಿ ತೋರಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ದೂರು ನೀಡಿದ ಎರಡು ವಾರಗಳ ನಂತರವೂ ಪ್ರಧಾನಿ ಮೋದಿ ವಿರುದ್ಧ ಆಯೋಗದಿಂದ ಯಾವುದೇ ಕ್ರಮ ಜರುಗಿಇಲ್ಲ. ಈ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪುಲ್ವಾಮಾ ಹಾಗೂ ಬಾಲಾಕೋಟ್ ಬಗ್ಗೆ ಮೋದಿ ತಮ್ಮ ಚುನಾವಣೆ ಭಾಷಣ ವೇಳೆ ಪ್ರಸ್ತಾವ ಮಾಡಿದ್ದಾರೆ.