ನೋಯ್ಡಾದಲ್ಲಿ ನಿಷೇಧಾಜ್ಞೆ: ಏಪ್ರಿಲ್ 30ರವರೆಗೂ ಈ ನಿಯಮ ಪಾಲನೆ ಕಡ್ಡಾಯ
ನೋಯ್ಡಾ, ಮಾರ್ಚ್ 18: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಸಾಲು ಸಾಲು ಹಬ್ಬ-ಹರಿದಿನಗಳ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಗೌತಮ್ ಬುದ್ಧ ನಗರ ಠಾಣೆ ಪೊಲೀಸರು ಏಪ್ರಿಲ್ 30ರವರೆಗೂ ಸಿಆರ್ ಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಯಾವುದೇ ರೀತಿ ಅಪ್ಪಣೆ ಇಲ್ಲದ ಪ್ರತಿಭಟನೆ, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಗೊಳ್ಳದೇ ಕೊವಿಡ್-19 ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಎಣ್ಣೆ ಅಂಗಡಿಗಳೆಲ್ಲ ಬಂದ್: ಈ ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್!
ಉತ್ತರ ಪ್ರದೇಶದಲ್ಲಿ ಹೋಳಿ, ಸಬ್-ಇ ಬರಾತ್, ಗುಡ್ ಫ್ರೈಡೇ, ನವರಾತ್ರಿ, ಅಂಬೇಡ್ಕರ್ ಜಯಂತಿ, ರಾಮ ನವಮಿ, ಮಹಾವೀರ ಜಯಂತಿ, ಹನುಮಾನ್ ಜಯಂತಿ ಸೇರಿದಂತೆ ಸಾಲು ಸಾಲು ಹಬ್ಬಗಳಲ್ಲಿ ಕೊವಿಡ್-19 ಶಿಷ್ಟಾಚಾರ ಪಾಲಿಸುವುದು ಕಡ್ಡಾಯವಾಗಿದೆ. ಉತ್ತರ ಪ್ರದೇಶ ಪೊಲೀಸರು ಕೊರೊನಾವೈರಸ್ ನಿಯಂತ್ರಿಸುವ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹೇರಿದ್ದಾರೆ.
ನೋಯ್ಡಾದಲ್ಲಿ ನಿಷೇಧಾಜ್ಞೆ ಮತ್ತು ನಿರ್ಬಂಧಿತ ಅಂಶಗಳು:
- ಸಮಾಜ ವಿರೋಧಿ ಅಂಶಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸಲು ಪ್ರಯತ್ನಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಈ ಅವಧಿಯಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ COVID-19 ಶಿಷ್ಟಾಚಾರಗಳನ್ನು ಅನುಸರಿಸಬೇಕಾಗುತ್ತದೆ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಶುತೋಷ್ ದ್ವಿವೇದಿ ಎಂದು ಹೇಳಿದ್ದಾರೆ.
- ಅಂಗವಿಕಲರು, ದೃಷ್ಟಹೀನರ ಹೊರತಾಗಿ ಯಾರೂ ಕೂಡಾ ಬಡಿಗೆ, ಕಬ್ಬಿಣದ ರಾಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕವಾಗಿ ಓಡಾಡುವಂತಿಲ್ಲ.
- ಪೂರ್ವಾನುಮತಿ ಇಲ್ಲದೇ ಯಾರೊಬ್ಬರೂ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸುವಂತಿಲ್ಲ.
- ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಯೊಳಗೆ ಯಾವುದೇ ಬಂದೂಕುಗಳನ್ನು ಅನುಮತಿಸಲಾಗುವುದಿಲ್ಲ. ಸರ್ಕಾರವು ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ಒದಗಿಸಿರುವ ಜನರು ಕೂಡಾ ತಮ್ಮ ಬಂದೂಕುಧಾರಿಯನ್ನು ಕಚೇರಿಗಳಿಂದ ಹೊರಗಿಡಬೇಕು.
- ವಿವಾಹ ಸಮಾರಂಭ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆ ಮುಂತಾದ ಘಟನೆಗಳಲ್ಲಿ ಸಂಭ್ರಮಾಚರಣೆ ವೇಳೆಯಲ್ಲಿ ಗುಂಡು ಹಾರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
- ಸಿಆರ್ ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಯಾವುದೇ ನಿರ್ಬಂಧಿತ ಆದೇಶಗಳ ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.