ರಾಹುಲ್ ಗಾಂಧಿ ಟ್ವೀಟ್ಗೆ ತಿರುಗೇಟು ನೀಡಿದ ಬಿಜೆಪಿ: ಫೋಟೊ ಹಿಂದಿನ ರಹಸ್ಯ ಬಯಲು
ಕೇಂದ್ರ ಸರ್ಕಾರ ಮಾಡಿದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದು, ದೆಹಲಿ ಚಲೋ ಎಂದು ಸಾಗುತ್ತಿದ್ದಾರೆ. ಅದೇ ಸಮಯದಲ್ಲಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಫೋಟೋವೊಂದನ್ನು ಟ್ವೀಟ್ ಮಾಡಿದ್ದು ರೈತರಿಗೆ ಬೆಂಬಲ ನೀಡುವುದರ ಜೊತೆಗೆ, ರೈತರನ್ನು ನಡೆಸಿಕೊಳ್ಳುವುದರ ಕುರಿತಾಗಿ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡಿದ್ದಾರೆ.
ದೆಹಲಿಯ ಸಿಂಘು, ಟಿಕ್ರಿಯಲ್ಲಿ ರೈತರ ಜಮಾವಣೆ: ಉತ್ತರ ದೆಹಲಿಯತ್ತ ಹೋಗಲು ನಕಾರ
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಶನಿವಾರ (ನವೆಂಬರ್ 28) ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ವೃದ್ಧ ರೈತನೊಬ್ಬನ ಮೇಲೆ ಯೋಧನು ಲಾಠಿ ಬೀಸುತ್ತಿರುವುದಾಗಿ ಕಂಡು ಬರುತ್ತಿದೆ. ಈ ಫೋಟೋ ಜೊತೆಗೆ ಶೀರ್ಷಿಕೆ ಬರೆದಿದ್ದ ರಾಹುಲ್ ಗಾಂಧಿ ''ತುಂಬಾ ದುಃಖದ ಫೋಟೋ. ನಮ್ಮ ಘೋಷಣೆ 'ಜೈ ಜವಾನ್ ಜೈ ಕಿಸಾನ್', ಆದರೆ ಇಂದು ಪ್ರಧಾನಿ ಮೋದಿ ಅವರ ದುರಹಂಕಾರದಿಂದಾಗಿ ಯೋಧನು ರೈತನ ವಿರುದ್ಧ ನಿಲ್ಲುವಂತೆ ಮಾಡಿತು. ಇದು ತುಂಬಾ ಅಪಾಯಕಾರಿ'' ಎಂದು ಟ್ವೀಟ್ ಮಾಡಿದ್ದರು.
बड़ी ही दुखद फ़ोटो है। हमारा नारा तो ‘जय जवान जय किसान’ का था लेकिन आज PM मोदी के अहंकार ने जवान को किसान के ख़िलाफ़ खड़ा कर दिया।
— Rahul Gandhi (@RahulGandhi) November 28, 2020
यह बहुत ख़तरनाक है। pic.twitter.com/1pArTEECsU
ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ಬಿಜೆಪಿಯ ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಲ್ವಿಯಾ ಕೂಡ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಪೋಸ್ಟ್ ಮಾಡಿರುವ ಫೋಟೋವಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಅಮಿತ್ ಮಾಲ್ವಿಯಾ ''ರಾಹುಲ್ ಗಾಂಧಿ ಬಹಳ ಸಮಯದ ನಂತರ, ಭಾರತ ಕಂಡಂತಹ ಅತ್ಯಂತ ಕೆಟ್ಟ ವಿರೋಧ ಪಕ್ಷದ ನಾಯಕರಾಗಿರಬೇಕು' ಎಂದು ಬರೆದಿದ್ದಾರೆ.
Rahul Gandhi must be the most discredited opposition leader India has seen in a long long time. https://t.co/9wQeNE5xAP pic.twitter.com/b4HjXTHPSx
— Amit Malviya (@amitmalviya) November 28, 2020
ಅಮಿತ್ ಮಾಲ್ವಿಯಾ ಟ್ವೀಟ್ನಲ್ಲಿ ಎರಡು ಫೋಟೋಗಳನ್ನು ಕಾಣಬಹುದು. ಮೊದಲನೆಯದು ರಾಹುಲ್ ಗಾಂಧಿಯವರು ಪೋಸ್ಟ್ ಮಾಡಿದ ಫೋಟೋದಲ್ಲಿ ಯೋಧನು ರೈತನನ್ನು ಹೊಡೆಯುತ್ತಿರುವುದು ಕಾಣಬಹುದು. ಅದೇ ಸಮಯದಲ್ಲಿ ಯೋಧನ ಲಾಠಿಯು ರೈತನನ್ನು ಸಹ ಮುಟ್ಟಲಿಲ್ಲ ಎಂದು ಎರಡನೇ ಚಿತ್ರದಲ್ಲಿ ಕಂಡು ಬರುತ್ತದೆ.