ಮೋದಿ ಸಂಪುಟಕ್ಕೆ 21 ಸಚಿವರ ಸೇರ್ಪಡೆ
ನವದೆಹಲಿ, ನ.9 : ಮೇ ತಿಂಗಳಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದ್ದು, 21 ನೂತನ ಸಚಿವರನ್ನು ಸೇರಿಸಿಕೊಂಡಿದ್ದಾರೆ. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಶಿವಸೇನೆಯ ಅನಿಲ್ ದೇಸಾಯಿ ಪ್ರಮಾಣ ವಚನ ಸ್ವೀಕರಿಸಲಿಲ್ಲ ಮತ್ತು ಶಿವಸೇನೆಯ ನಾಯಕರು ಸಮಾರಂಭದಿಂದ ದೂರವುಳಿದಿದ್ದರು.
ನಾಲ್ವರು
ಸಂಪುಟ
ದರ್ಜೆ
ಸಚಿವರಾಗಿ,
ಮೂವರು
ಸ್ವತಂತ್ರ
ಖಾತೆ
ಸಚಿವರಾಗಿ
ಮತ್ತು
14
ಮಂದಿ
ರಾಜ್ಯಖಾತೆ
ಸಚಿವರಾಗಿ
ನರೇಂದ್ರ
ಮೋದಿ
ಅವರ
ಸಂಪುಟ
ಸೇರಿದ್ದಾರೆ.
ರಾಜ್ಯಸಭಾ
ಸದಸ್ಯ
ಅನಿಲ್
ದೇಸಾಯಿ
ಅವರು
ಸಂಪುಟ
ಸೇರಬೇಕಾಗಿತ್ತು.
ಅವರಿಗೆ
ಸಂಪುಟ
ದರ್ಜೆ
ಸ್ಥಾನವನ್ನು
ಶಿವಸೇನೆ
ಕೇಳಿತ್ತು.
ಆದರೆ,
ಬಿಜೆಪಿ
ಇದನ್ನು
ನಿರಾಕರಿಸಿತ್ತು.
ಇದರಿಂದ
ಮುನಿಸಿಕೊಂಡ
ಶಿವಸೇನೆ
ನಾಯಕರು
ಅನಿಲ್
ದೇಸಾಯಿ
ಅವರಿಗೆ
ಪ್ರಮಾಣ
ವಚನ
ಸ್ವೀಕರಿಸಿದಂತೆ
ಸೂಚಿಸಿದ್ದರು.
[ಹೊಸ
ಸಚಿವರ
ಪ್ರಮಾಣ
ವಚನದ
ಚಿತ್ರಗಳು]
ಅನಿಲ್ ದೇಸಾಯಿ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಮುಂಬೈಗೆ ವಾಪಸ್ ಆಗಿದ್ದಾರೆ. ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಶಿವಸೇನೆ ಮುನಿಸಿಕೊಂಡಿದ್ದು, ಬಿಜೆಪಿ ಮತ್ತು ಸೇನೆ ಮೈತ್ರಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಮೋದಿ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿರುವ ಶಿವಸೇನೆಯ ಅನಂತ್ ಗೀತೆ ಅವರು ಇಂದು ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. [ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ]
ಇಂದು
ಮೋದಿ
ಸಂಪುಟ
ಸೇರಿದವರು
*
ಮನೋಹರ್
ಪಾರಿಕ್ಕರ್
(ಸಂಪುಟ
ದರ್ಜೆ)
*
ಸುರೇಶ್
ಪ್ರಭು
(ಸಂಪುಟ
ದರ್ಜೆ)
*
ಜಗತ್
ಪ್ರಕಾಶ್
ನಡ್ಡಾ
(ಸಂಪುಟ
ದರ್ಜೆ)
*
ಬೀರೇಂದ್ರ
ಸಿಂಗ್
(ಸಂಪುಟ
ದರ್ಜೆ)
*
ಬಂಡಾರು
ದತ್ತಾತ್ರೇಯ
(ಸ್ವತಂತ್ರ
ಖಾತೆ)
*
ರಾಜೀವ್
ಪ್ರತಾಪ್
ರೂಡಿ
(ಸ್ವತಂತ್ರ
ಖಾತೆ)
*
ಡಾ.ಮಹೇಶ್
ಶರ್ಮಾ
(ಸ್ವತಂತ್ರ
ಖಾತೆ)
*
ಮುಖ್ತಾರ್
ಅಬ್ಬಾಸ್
ನಖ್ವಿ
(ರಾಜ್ಯ
ಖಾತೆ
ಸಚಿವರು)
*
ರಾಮ್
ಕೃಪಾಲ್
ಯಾದವ್
(ರಾಜ್ಯ
ಖಾತೆ
ಸಚಿವರು)
*
ಹರಿಭಾಯ್
ಚೌಧರಿ
(ರಾಜ್ಯ
ಖಾತೆ
ಸಚಿವರು)
*
ಪ್ರೊ.ಸನ್ವಾರ್
ಲಾಲ್
ಜಾಟ್
(ರಾಜ್ಯ
ಖಾತೆ
ಸಚಿವರು)
*
ಮೋಹನ್
ಭಾಯ್
ಕುಂಡಾರಿಯಾ
(ರಾಜ್ಯ
ಖಾತೆ
ಸಚಿವರು)
*
ಗಿರಿರಾಜ್
ಸಿಂಗ್
(ರಾಜ್ಯಖಾತೆ
ಸಚಿವರು)
*
ಹನ್ಸರಾಜ್
ಅಹಿರ್
(ರಾಜ್ಯಖಾತೆ
ಸಚಿವರು)
*
ಪ್ರೊ.ಡಾ.ರಾಮ್ಶಂಕರ್
ಕಟಾರಿಯಾ
(ರಾಜ್ಯಖಾತೆ
ಸಚಿವರು)
*
ವೈ.ಎಸ್.ಚೌಧರಿ
(ರಾಜ್ಯಖಾತೆ
ಸಚಿವರು)
*
ಜಯಂತ್
ಸಿನ್ಹಾ
(ರಾಜ್ಯಖಾತೆ
ಸಚಿವರು)
*
ರಾಜವರ್ಧನ್
ಸಿಂಗ್
ರಾಥೋಡ್
(ರಾಜ್ಯಖಾತೆ
ಸಚಿವರು)
*
ಬಾಬು
ಸುಪ್ರಿಯೋ
(ರಾಜ್ಯಖಾತೆ
ಸಚಿವರು)
*
ಎಸ್.ಎನ್.ಜ್ಯೋತಿ
(ರಾಜ್ಯಖಾತೆ
ಸಚಿವರು)
*
ವಿಜಯ್
ಸಂಪ್ಲ
(ರಾಜ್ಯಖಾತೆ
ಸಚಿವರು)
ನೂತನ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಸೇರಿದಂತೆ ಪ್ರಮುಖ ಕೇಂದ್ರ ಸಚಿವರು ಭಾಗಿಯಾಗಿದ್ದರು.