ಪಿವಿ ನರಸಿಂಹರಾವ್ ಜನ್ಮದಿನ: ಟ್ವಿಟ್ಟರ್ ಮೂಲಕ ಸ್ಮರಿಸಿದ ಮೋದಿ
Recommended Video
ನವದೆಹಲಿ, ಜೂನ್ 28: ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರ 97 ನೇ ಜನ್ಮದಿನದ ನಿಮಿತ್ತ (28 ಜೂನ್ 1921 - 23 ಡಿಸೆಂಬರ್ 2004) ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.
ಭಾರತದ ಇತಿಹಾಸದಲ್ಲಿ ಬಹಳ ಸಂಕಷ್ಟದ ಸಮಯಗಳಲ್ಲೂ ತಮ್ಮ ನಾಯಕತ್ವದಿಂದ ಸಮರ್ಥವಾಗಿ ಆಡಳಿತ ನಡೆಸಿದ ನರಸಿಂಹರಾವ್ ಅವರನ್ನು ಮೊದಿ ಟ್ವಿಟ್ಟರ್ ಮೂಲಕ ಹಾಡಿ ಹೊಗಳಿದರು.
ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?
"ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನು ಅವರ ಜನ್ಮದಿನದಂದು ನೆನೆಯುತ್ತೇನೆ, ಬಹಳ ಸಂಕಷ್ಟದ ದಿನಗಳಲ್ಲೂ ತಮ್ಮ ಸಮರ್ಥ ನಾಯಕತ್ವದ ಮೂಲಕ ದೇಶವನ್ನು ಮುನ್ನಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅತ್ಯುತ್ತಮ ಬುದ್ಧಿಮತ್ತೆ, ಅಸಾಧಾರಣ ಪಾಂಡಿತ್ಯದಿಂದ ಅವರು ಇತಿಹಾಸದಲ್ಲಿ ಅಚ್ಚೊತ್ತಿದ್ದಾರೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
Remembering our former PM Shri PV Narasimha Rao on his birth anniversary. Shri Rao is widely respected as a statesman who provided valuable leadership during a critical period of India’s history. Blessed with immense wisdom, he made a mark as a distinguished scholar as well.
— Narendra Modi (@narendramodi) June 28, 2018
ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿ ವಿವಾದ ಉತ್ತುಂಗದಲ್ಲಿತ್ತು. ಈ ಎಲ್ಲ ಕಠಿಣ ಸಮಸ್ಯೆಗಳನ್ನೂ ನಾಜೂಕಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇಂದಿನ ತೆಲಂಗಾಣ ರಾಜ್ಯದ ಲಕ್ನೇಪಳ್ಳಿ ಎಂಬಲ್ಲಿ ಜನಿಸಿದ ನರಸಿಂಹರಾವ್, ಭಾರತದ 9 ನೇ ಪ್ರಧಾನಿಯಾಗಿ 1991 ರಿಂದ 1996ರವರೆಗೆ ಕಾರ್ಯನಿರ್ವಹಿಸಿದ್ದರು.