ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಕರೆಗೂ ಪ್ರತಿಕ್ರಿಯಿಸದ ದೀದಿಯದು ದುರಹಂಕಾರ: ಮೋದಿ

|
Google Oneindia Kannada News

Recommended Video

ಜನರ ರಕ್ಷಣೆಯ ವಿಚಾರದಲ್ಲೂ ರಾಜಕೀಯ..!? | Oneindia Kannada

ನವದೆಹಲಿ, ಮೇ 06: ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್ ಫೋನಿಯಿಂದಾದ ಹಾನಿಯ ಕುರಿತು ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಕರೆಯನ್ನು ಸ್ವೀಕರಿಸದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಮೋದಿ ಟೀಕಿಸಿದ್ದಾರೆ.

"ಪಶ್ಚಿಮ ಬಂಗಾಳದ ಜನರ ಕ್ಷೇಮ ಸಮಾಚಾರ ವಿಚಾರಿಸಲು ಕರೆ ಮಾಡಿದ ನನ್ನ ಕರೆಯನ್ನು ಸ್ವೀಕರಿಸದ ದೀದಿಯದು ದುರಹಂಕಾರದ ಪ್ರವೃತ್ತಿ" ಎಂದು ಮೋದಿ ಹೇಳಿದ್ದಾರೆ.

ಈ ಮುನಿಸು ತರವೇ?! ಪ್ರಧಾನಿ ಮೋದಿ ಕರೆ ಮಾಡಿದರೂ ಕ್ಯಾರೆ ಎನ್ನದ ದೀದಿ!ಈ ಮುನಿಸು ತರವೇ?! ಪ್ರಧಾನಿ ಮೋದಿ ಕರೆ ಮಾಡಿದರೂ ಕ್ಯಾರೆ ಎನ್ನದ ದೀದಿ!

"ನಾನು ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್ ನಿಂದ ಉಂಟಾದ ಹಾನಿಯ ಬಗ್ಗೆ ಮಾತನಾಡಲು ಮಮತಾ ಬ್ಯಾನರ್ಜಿ ಅವರಿಗೆ ಫೋನ್ ಮಾಡಿದ್ದೆ. ಆದರೆ ಸೈಕ್ಲೋನ್ ನಿಂದಾಗಿ ಇಡೀ ರಾಜ್ಯ ತತ್ತರಿಸಿರುವಾಗ ಅವರು ರಾಜಕೀಯ ಲೆಕ್ಕಾಚಾರ ಮಾಡುತ್ತಿದ್ದಾರೆ" ಎಂದು ಮೋದಿ ಹೇಳಿದರು.

PM Modi on Mamata Banerjee not responding to his call says, an arrogant behavior

ಮಣ್ಣಿನ ಲಾಡು ಮಾಡಿ ಮೋದಿ ಹಲ್ಲು ಮುರಿಯಲು ಕಲ್ಲು ಇಡುತ್ತೇನೆಂದ ದೀದಿ ಮಮತಾಮಣ್ಣಿನ ಲಾಡು ಮಾಡಿ ಮೋದಿ ಹಲ್ಲು ಮುರಿಯಲು ಕಲ್ಲು ಇಡುತ್ತೇನೆಂದ ದೀದಿ ಮಮತಾ

"ಸ್ಪೀಡ್ ಬ್ರೇಕರ್ ದೀದಿ ಅವರು ಸೈಕ್ಲೋನ್ ಫೋನಿಯಲ್ಲೂ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ನಾನು ಫೋನ್ ಮಾಡಿದ್ದರೂ ಸ್ವೀಕರಿಸದೆ ದುರಂಹಕಾರ ತೋರಿಸಿದ್ದಾರೆ. ನಾಣು ಅವರ ಕರೆಗಾಗಿ ನಂತರವೂ ಕಾದಿದ್ದೇನೆ. ಆದರೆ ಅವರು ಕರೆ ಮಾಡಲಿಲ್ಲ. ಆದರೂ ನಾನು ಮತ್ತೊಮ್ಮೆ ಅವರಿಗೆ ಫೋನ್ ಮಾಡಿದೆ. ಆದರೂ ಅವರು ಹಿಂತಿರುಗಿ ಕರೆ ಮಾಡಲಿಲ್ಲ. ನನಗೆ ಪಶ್ಚಿಮ ಬಂಗಾಳದ ಜನರ ಸುರಕ್ಷತೆಯ ಬಗ್ಗೆ ಆತಂಕವಿದೆ" ಎಂದು ಮೋದಿ ಹೇಳಿದರು.

English summary
Prime minister Narendra Modi on West Bengal chief minister Mamata Banerjee not receiving his call told, "I was called her to speak about cyclone Fani, but she did not pic my call, Its an arrogant behavior"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X