ಮೆಟ್ರೋ ಮೆಜೆಂತಾ ಲೈನ್ ಉದ್ಘಾಟನೆ ಪಿಎಂ vs ಸಿಎಂ
ನವದೆಹಲಿ, ಡಿಸೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ದೆಹಲಿ ಮೆಟ್ರೋ ರೈಲಿನ ಮೆಜೆಂತಾ ಲೈನ್ ಉದ್ಘಾಟಿಸಲಿದ್ದಾರೆ. ಆದರೆ, ಈ ಉದ್ಘಾಟನಾ ಸಮಾರಂಭಕ್ಕೆ ದೆಹಲಿಸಿಎಂ ಅರವಿಂದ್ ಕೇಜ್ರಿವಾಲ್ಗೆ ಅಧಿಕೃತ ಆಹ್ವಾನ ಸಿಕ್ಕಿಲ್ಲ.
ನೋಯ್ಡಾದ ಬಟಾನಿಕಲ್ ಗಾರ್ಡನ್ನಿಂದ ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದ ತನಕ ಇರುವ ಮೆಜೆಂತಾ ಲೈನ್ ಸಂಪರ್ಕವನ್ನು ಲೋಕಾರ್ಪಣೆ ಮಾಡಲಾಗಿದೆ.
ನೋಯ್ಡಾದಲ್ಲಿ ಉದ್ಘಾಟನೆ ಕಾರ್ಯಕ್ರಮದ ನಂತರ ಮೋದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ವಿವಿಐಪಿ ಆಹ್ವಾನಿತರಾಗಿದ್ದಾರೆ.
This new line of the Delhi Metro is yet another example of how we are modernising urban transportation. I will also travel on the Metro tomorrow. This year I have had the opportunity to inaugurate and travel in the Kochi as well as Hyderabad Metro. https://t.co/E41dHn1y68
— Narendra Modi (@narendramodi) December 24, 2017
ಈ ಕಾರ್ಯಕ್ರಮದ ಕುರಿತು ಯಾವುದೇ ರೀತಿಯ ಆಹ್ವಾನವನ್ನು ಇದುವರೆಗೂ ಸ್ವೀಕರಿಸಿಲ್ಲ ಎಂದು ದೆಹಲಿ ಸರ್ಕಾರದ ವಕ್ತಾರರು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ನಡುವಿನ ಗುದ್ದಾಟ ಮುಂದುವರೆದಿದೆ. ಮೆಟ್ರೋ ದರ ಏರಿಕೆ ನಂತರ ಈಗ ಮೆಟ್ರೋ ಹೊಸ ಲೈನ್ ಉದ್ಘಾಟನೆ ಕಿತ್ತಾಟ ಆರಂಭವಾಗಿದೆ.