ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿಗೆ ಗೈರು: ಸಚಿವರಿಗೆ ಕಾದಿದೆ ಆಘಾತ!

|
Google Oneindia Kannada News

ನವದೆಹಲಿ, ಜುಲೈ 16: ಮಂತ್ರಿ ಸ್ಥಾನ ಪಡೆದು ವಿನಾಕಾರಣ ಸಂಸತ್ತಿಗೆ ಗೈರಾಗುವ ಸಂಸದರಿಗೆ ಆಘಾತ ಕಾದಿದೆ. ಸಂಸತ್ತಿಗೆ ಬಾರದೆ ಇರುವ ಸಚಿವರ ಪಟ್ಟಿಯನ್ನು ತಯಾರಿಸಿ, ಪ್ರತಿದಿನ ಸಂಜೆ ಅಂದು ಸಂಸತ್ತಿನಲ್ಲಿ ಯಾರೆಲ್ಲ ಗೈರಾಗಿದ್ದರು ಎಂಬ ವರದಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ರಾಜಕೀಯದ ಬಗ್ಗೆ ಮೋದಿ-ಅಮಿತ್ ಶಾ ಗೆ ವರದಿ: ಯಡಿಯೂರಪ್ಪರಾಜ್ಯ ರಾಜಕೀಯದ ಬಗ್ಗೆ ಮೋದಿ-ಅಮಿತ್ ಶಾ ಗೆ ವರದಿ: ಯಡಿಯೂರಪ್ಪ

"ಪ್ರತಿಯೊಬ್ಬ ಸಚಿವರೂ ರಾಜಕೀಯವನ್ನು ಮೀರಿ ಕೆಲಸ ಮಾಡಬೇಕು" ಎಂದು ಕರೆ ನೀಡಿರುವ ಮೋದಿ, ಎಲ್ಲ ಸಂಸದರೂ ತಮ್ಮ ಕ್ಷೇತ್ರದಲ್ಲಿ ವಿಭಿನ್ನವಾದ ಮತ್ತು ಗುರುತಿಸುಂಥ ಕೆಲಸ ಮಾಡಬೇಕು ಎಂದರು.

ಸೆಪ್ಟೆಂಬರ್‌ನಲ್ಲಿ ಮೋದಿ ಅಮೆರಿಕ ಪ್ರವಾಸ, ವಿಶೇಷತೆಯೇನು?ಸೆಪ್ಟೆಂಬರ್‌ನಲ್ಲಿ ಮೋದಿ ಅಮೆರಿಕ ಪ್ರವಾಸ, ವಿಶೇಷತೆಯೇನು?

ಇಂದು ನೀರಿನ ಸಮಸ್ಯೆ ಎಂಬುದು ಅಪಾಯಕಾರಿ ಸಮಸ್ಯೆಯಾಗಿ ರೂಪುಗೊಳ್ಳುತ್ತಿರುವುದರಿಂದ ಅದಕ್ಕೆ ಪರಿಹಾರವೇನು ಎಂಬುದನ್ನು ಎಲ್ಲ ಸಚಿವರು ಕೂತು ಚರ್ಚಿಸಿ ನಿರ್ಧರಿಸಬೇಕು ಎಂದು ಮೋದಿ ಹೇಳಿದರು.

PM Modi asks Prahlad Joshi to give names of absent minister in Parliament

"ನಿಮ್ಮ ಕೆಲಸವನ್ನು ವ್ರತ ಎಂಬಂತೆ ಸ್ವೀಕರಿಸಿ ಮಾಡಿ, ಕ್ಷಯ ಮತ್ತು ಕುಷ್ಠ ರೋಗದಂಥ ಅಪಾಯಕಾರಿ ರೋಗಗಳನ್ನು ನಿಯಂತ್ರಿಸಲು ಹೋರಾಡಿ ಎಂದು ಅವರು ಹೇಳಿದರು.

English summary
Prime minister Narendra Modi asked Parliamentary affairs minister Prahlad Joshi to give names of ministers who had been absent despite being rostered for Parliament duty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X