ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಸಂಖ್ಯಾತ ಜನರಿಗೆ ಶ್ರೀಗಳು ದಾರಿ ದೀಪ: ಪ್ರಧಾನಿ ಶೋಕ ಸಂದೇಶ
ನವದೆಹಲಿ, ಡಿಸೆಂಬರ್ 29: ಪೇಜಾವರ ಶ್ರೀಗಳು ಅಸಂಖ್ಯಾತ ಜನರಿಗೆ ದಾರಿ ದೀಪವಾಗಿದ್ದರು. ಅವರ ಅಗಲಿಕೆಯಿಂದ ದೇಶ ಬಡವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಇಂದು ಬೆಳಗ್ಗೆ ಪೇಜಾವರ ಮಠದಲ್ಲಿ ಕೊನೆಯುಸಿರೆಳೆದಿದ್ದಾರೆ.ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಅವರು ಇಡೀ ಸಮಾಜಕ್ಕೋಸ್ಕರ ಕೆಲಸ ಮಾಡಿದವರು.
ಅವರನ್ನು ಭೇಟಿ ಮಾಡಲು ಸಾಕಷ್ಟು ಅವಕಾಶ ದೊರೆತಿದ್ದವು ಅದು ನನ್ನ ಪುಣ್ಯ. ಗುರು ಪೂರ್ಣಿಮಾ ದಿನ ನಮ್ಮ ಕೊನೆಯ ಭೇಟಿಯಾಗಿತ್ತು. ಅಂದು ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ದೊರೆತಿತ್ತು. ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
Comments
narendra modi pejawar seer pejawar mutt swamiji vishwesha teertha swamiji udupi ಪೇಜಾವರ ಶ್ರೀ ಪೇಜಾವರ ಸ್ವಾಮೀಜಿ ವಿಶ್ವೇಶ ತೀರ್ಥ ಸ್ವಾಮೀಜಿ ಉಡುಪಿ ನಿಧನ ನರೇಂದ್ರ ಮೋದಿ
English summary
Prime Minister Narendra Modi Condolence: Sri Vishvesha Teertha Swamiji of the Sri Pejawar Matha, Udupi will remain in the hearts and minds of lakhs of people for whom he was always a guiding light.
Story first published: Sunday, December 29, 2019, 11:12 [IST]