ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಕೋಟ್ ದಾಳಿ ಬಗ್ಗೆ ಪ್ರಧಾನಿ ಮೋದಿ ಹೇಳಿದ 'ಆ ರಹಸ್ಯ'

|
Google Oneindia Kannada News

Recommended Video

Surgical Strike 2: ಬಾಲಕೋಟ್ ದಾಳಿ ಬಗ್ಗೆ ಪ್ರಧಾನಿ ಮೋದಿ ಹೇಳಿದ 'ಆ ರಹಸ್ಯ'

ನವದೆಹಲಿ, ಮಾರ್ಚ್ 31: ಎಲ್ಲಿಂದ ಭಯೋತ್ಪಾದನೆಯು ರಿಮೋಟ್-ಕಂಟ್ರೋಲ್ ರೀತಿ ಬಳಸಲಾಗುತ್ತಿದೆಯೋ ಅಲ್ಲೇ 'ಆಟ' ಆಡಬೇಕು ಎಂಬ ಕಾರಣಕ್ಕೆ ಭಾರತೀಯ ವಾಯು ಸೇನೆಯಿಂದ ಬಾಲಕೋಟ್ ವಾಯು ದಾಳಿಯನ್ನು ಆಯೋಜಿಸಲು ಚಿಂತಿಸಿದ್ದಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಜಬರ್ ದಸ್ತ್ ಉತ್ತರ ನೀಡಿದ ಜೇಟ್ಲಿಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಜಬರ್ ದಸ್ತ್ ಉತ್ತರ ನೀಡಿದ ಜೇಟ್ಲಿ

ಮೈ ಭಿ ಚೌಕೀದಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಸಿಕ್ಕಿಬಿದ್ದಿತ್ತು. ಏಕೆಂದರೆ, ವಾಯು ದಾಳಿ ನಡೆದಿದೆ ಅಂತ ಹೇಳಿದರೆ ಅಲ್ಲಿ ಉಗ್ರಗಾಮಿಗಳ ನೆಲೆಗಳು ಇದ್ದವು ಎಂಬುದನ್ನು ಒಪ್ಪಿಕೊಳ್ಳಬೇಕು. ಅಲ್ಲಿ ಉಗ್ರ ನೆಲೆಗಳು ಇಲ್ಲ ಎನ್ನುತ್ತಿದ್ದಾರೆ. ಅವರು ಈಗ ಮುಚ್ಚಿಡಬೇಕು. ಅವರು ಅಲ್ಲಿಗೆ ಯಾರನ್ನೂ ಹೋಗಲು ಬಿಡುತ್ತಿಲ್ಲ. ಬಾಲಕೋಟ್ ಪ್ರದೇಶದ ಪುನರ್ ನಿರ್ಮಾಣ ಮಾಡಲಾಗಿದೆ ಎಂಬುದು ನಮಗೆ ಗೊತ್ತಾಗಿದೆ ಎಂದಿದ್ದಾರೆ.

Narendra Modi

ಅಲ್ಲಿ ಶಾಲೆ ನಡೆಯುತ್ತಿತ್ತು ಎಂದು ತೋರಿಸಲು ಹಾಗೆ ಮಾಡಲಾಗಿದೆ. ಹಾಗೆ ಮಾಡುವ ಮೂಲಕ ಅಲ್ಲಿ ಉಗ್ರರ ನೆಲೆ ಇರಲಿಲ್ಲ ಎಂದು ಜನರನ್ನು ಕರೆದುಕೊಂಡು ಹೋಗಿ, ತೋರಿಸುವ ಇರಾದೆ ಅವರದು ಎಂದಿದ್ದಾರೆ ಪ್ರಧಾನಿ. ಯಾರು ಬಾಲಕೋಟ್ ವಾಯು ದಾಳಿ ವಿಚಾರಾದಲ್ಲಿ ನನ್ನನ್ನು ಬಯ್ಯುತ್ತಿದ್ದಾರೋ ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.

English summary
Pakistan have been saying that there are no terror camps. Now they have to hide it. They are not allowing anybody to go there. We’ve been told Balakot area is being reconstructed by Pakistan to show that a school is being run there, so that people can be taken there and shown that no terror camp existed there-PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X