ಬಾಲಕೋಟ್ ದಾಳಿ ಬಗ್ಗೆ ಪ್ರಧಾನಿ ಮೋದಿ ಹೇಳಿದ 'ಆ ರಹಸ್ಯ'
Recommended Video
ನವದೆಹಲಿ, ಮಾರ್ಚ್ 31: ಎಲ್ಲಿಂದ ಭಯೋತ್ಪಾದನೆಯು ರಿಮೋಟ್-ಕಂಟ್ರೋಲ್ ರೀತಿ ಬಳಸಲಾಗುತ್ತಿದೆಯೋ ಅಲ್ಲೇ 'ಆಟ' ಆಡಬೇಕು ಎಂಬ ಕಾರಣಕ್ಕೆ ಭಾರತೀಯ ವಾಯು ಸೇನೆಯಿಂದ ಬಾಲಕೋಟ್ ವಾಯು ದಾಳಿಯನ್ನು ಆಯೋಜಿಸಲು ಚಿಂತಿಸಿದ್ದಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಜಬರ್ ದಸ್ತ್ ಉತ್ತರ ನೀಡಿದ ಜೇಟ್ಲಿ
ಮೈ ಭಿ ಚೌಕೀದಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಸಿಕ್ಕಿಬಿದ್ದಿತ್ತು. ಏಕೆಂದರೆ, ವಾಯು ದಾಳಿ ನಡೆದಿದೆ ಅಂತ ಹೇಳಿದರೆ ಅಲ್ಲಿ ಉಗ್ರಗಾಮಿಗಳ ನೆಲೆಗಳು ಇದ್ದವು ಎಂಬುದನ್ನು ಒಪ್ಪಿಕೊಳ್ಳಬೇಕು. ಅಲ್ಲಿ ಉಗ್ರ ನೆಲೆಗಳು ಇಲ್ಲ ಎನ್ನುತ್ತಿದ್ದಾರೆ. ಅವರು ಈಗ ಮುಚ್ಚಿಡಬೇಕು. ಅವರು ಅಲ್ಲಿಗೆ ಯಾರನ್ನೂ ಹೋಗಲು ಬಿಡುತ್ತಿಲ್ಲ. ಬಾಲಕೋಟ್ ಪ್ರದೇಶದ ಪುನರ್ ನಿರ್ಮಾಣ ಮಾಡಲಾಗಿದೆ ಎಂಬುದು ನಮಗೆ ಗೊತ್ತಾಗಿದೆ ಎಂದಿದ್ದಾರೆ.
ಅಲ್ಲಿ ಶಾಲೆ ನಡೆಯುತ್ತಿತ್ತು ಎಂದು ತೋರಿಸಲು ಹಾಗೆ ಮಾಡಲಾಗಿದೆ. ಹಾಗೆ ಮಾಡುವ ಮೂಲಕ ಅಲ್ಲಿ ಉಗ್ರರ ನೆಲೆ ಇರಲಿಲ್ಲ ಎಂದು ಜನರನ್ನು ಕರೆದುಕೊಂಡು ಹೋಗಿ, ತೋರಿಸುವ ಇರಾದೆ ಅವರದು ಎಂದಿದ್ದಾರೆ ಪ್ರಧಾನಿ. ಯಾರು ಬಾಲಕೋಟ್ ವಾಯು ದಾಳಿ ವಿಚಾರಾದಲ್ಲಿ ನನ್ನನ್ನು ಬಯ್ಯುತ್ತಿದ್ದಾರೋ ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.