Breaking News: ದೆಹಲಿಯಲ್ಲಿ ಪಾಕ್ ಮೂಲದ ಭಯೋತ್ಪಾದಕನ ಬಂಧನ
ನವದೆಹಲಿ,
ಅಕ್ಟೋಬರ್
12:
ಪಾಕಿಸ್ತಾನ
ಮೂಲದ
ಭಯೋತ್ಪಾದಕನನ್ನು
ಮಂಗಳವಾರ
ದೆಹಲಿಯ
ಲಕ್ಷ್ಮೀನಗರ
ಪ್ರದೇಶದಲ್ಲಿ
ಬಂಧಿಸಲಾಗಿದೆ.
ದೆಹಲಿ
ವಿಶೇಷ
ತನಿಖಾ
ತಂಡವು
ಬಂಧಿತ
ಭಯೋತ್ಪಾದಕನನ್ನು
ತೀವ್ರ
ವಿಚಾರಣೆಗೊಳಪಡಿಸಿದೆ
ಎಂದು
ತಿಳಿದು
ಬಂದಿದೆ.
ಪಾಕಿಸ್ತಾನದ
ನರೋವಾಲ್
ನಿವಾಸಿ
ಮೊಹಮ್ಮದ್
ಅಶ್ರಫ್
ಬಂಧಿತ
ಉಗ್ರ
ಎಂದು
ಗುರುತಿಸಲಾಗಿದೆ.
ಬಂಧಿತ
ಉಗ್ರನು
ನಕಲಿ
ಗುರುತಿನ
ಚೀಟಿಯನ್ನು
ಹೊಂದಿದ್ದು,
ಬಂಧಿತನಿಂದ
ಎಕೆ
47
ಬಂದೂಕು,
ಗ್ರೆನೇಡ್
ಸೇರಿದಂತೆ
ಶಸ್ತ್ರಾಸ್ತ್ರಗಳನ್ನು
ವಶಕ್ಕೆ
ಪಡೆದುಕೊಳ್ಳಲಾಗಿದೆ.
ದೆಹಲಿಯಲ್ಲಿ ವಿಶೇಷ ತನಿಖಾ ತಂಡದ ಕೈಗೆ ಸಿಕ್ಕಿ ಬಿದ್ದಿರುವ ಉಗ್ರ ಮೊಹಮ್ಮದ್ ಅಶ್ರಫ್ ಮೌಲಾನಾ ಆಗಿ ವಾಸವಾಗಿದ್ದನು ಎಂದು ಗೊತ್ತಾಗಿದೆ. ದೆಹಲಿಯಷ್ಟೇ ಅಲ್ಲದೇ ಬೇರೆ ಬೇರೆ ನಗರಗಳಲ್ಲಿ ಈತ ಮೌಲಾನಾ ಆಗಿ ವಾಸವಾಗಿದ್ದನು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಐಎಸ್ಐ
ಜೊತೆಗೆ
ಉಗ್ರನ
ನಂಟು:
ಮೂಲಗಳ
ಪ್ರಕಾರ,
ಉಗ್ರ
ಮೊಹಮ್ಮದ್
ಅಶ್ರಫ್
ಪಾಕಿಸ್ತಾನದ
ಗುಪ್ತಚರ
ಇಲಾಖೆ(ಐಎಸ್ಐ)
ಜೊತೆಗೆ
ನೇರ
ಸಂಪರ್ಕದಲ್ಲಿದ್ದನು
ಎಂದು
ಗೊತ್ತಾಗಿದೆ.
ಬಂಧಿತ
ಭಯೋತ್ಪಾದಕ
ತಾನು
ಕೆಲವು
ದಿನಗಳವರೆಗೆ
ಕಾಶ್ಮೀರದಲ್ಲೂ
ವಾಸವಾಗಿರುವ
ಬಗ್ಗೆ
ಹೇಳಿಕೊಂಡಿದ್ದಾನೆ.
ಅದಾಗ್ಯೂ,
ತನಿಖಾಧಿಕಾರಿಗಳು
ಈ
ಬಗ್ಗೆ
ಮರುಪರಿಶೀಲನೆ
ನಡೆಸುತ್ತಿದ್ದಾರೆ.
ಈ
ಮಧ್ಯೆ
ಬಂಧಿತ
ಉಗ್ರ
ಮೊಹಮ್ಮದ್
ಅಶ್ರಫ್
ನಿರಂತರವಾಗಿ
ತನಿಖೆಯನ್ನು
ತಪ್ಪುದಾರಿಗೆ
ಎಳೆಯುತ್ತಿದ್ದಾನೆ
ಎಂದು
ಪೊಲೀಸರು
ಹೇಳಿದ್ದಾರೆ.
ರಾಷ್ಟ್ರೀಯ
ತನಿಖಾ
ಸಂಸ್ಥೆ
(ಎನ್ಐಎ)
ಮಂಗಳವಾರ
ಜಮ್ಮು
ಮತ್ತು
ಕಾಶ್ಮೀರ
ಮತ್ತು
ಇತರ
ಪ್ರಮುಖ
ನಗರಗಳಾದ್ಯಂತ
16
ಸ್ಥಳಗಳಲ್ಲಿ
ದಾಳಿ
ನಡೆಸಿದೆ.
ಕಾಶ್ಮೀರದಲ್ಲಿ
ಇತ್ತೀಚೆಗೆ
ನಡೆದ
ನಾಗರಿಕ
ಹತ್ಯೆಗಳ
ನಂತರ
ಭಯೋತ್ಪಾದಕರ
ವಿರುದ್ಧದ
ದಮನಕಾರಿ
ನಿಲುವು
ತೋರಿಸುವುದಕ್ಕಾಗಿ
ದಾಳಿ
ನಡೆಸಲಾಗುತ್ತಿದೆ.